ಪ್ರತಿನಿಧಿ ವರದಿ ತಿ.ನರಸೀಪುರ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಟಿ. ಎಂ. ನಂಜುಂಡಸ್ವಾಮಿ ಪ್ರಚಾರ ನಡೆಸಿದರು.
ಪಟ್ಟಣದ 11ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜತೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮನೆ ಮನೆ ಪ್ರಚಾರ ನಡೆಸಿದರು.
ಇದೇ ವೇಳೆ ಮಾತನಾಡಿ, ಕರ್ನಾಟಕ ಸರ್ಕಾರದ 5ಗ್ಯಾರಂಟಿ ಯೋಜನೆಗಳಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಬಡ ಮಹಿಳೆ ವಾರ್ಷಿಕ 1ಲಕ್ಷ, ನಿರುದ್ಯೋಗಿ ಯುವಕರಿಗೆ ಪ್ರತಿ ವರ್ಷ 1ಲಕ್ಷ ರೂ, ರೈತರ ಸಾಲ ಮನ್ನಾ, ರೈತರ ಬೆಳೆಗಳಿಗೆ ಎಂಎಸ್ಪಿ ದರ ನಿಗದಿ, ನರೇಗಾ ಕೂಲಿ ಹೆಚ್ಚಳ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಜಾತಿವಾರು ಸಮೀಕ್ಷೆಗೆ ಜಾರಿಗೆ ತರಲಾಗುವುದು. ಹಾಗಾಗಿ ಚಾಮರಾಜನಗರ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆ ಮತ ನೀಡಬೇಕು. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಸವಿತಾ ಸಮಾಜದ ಅಧ್ಯಕ್ಷ ನಾಗೇಂದ್ರ, ಯಜಮಾನರಾದ ರಂಗಸ್ವಾಮಿ, ಶಿವಣ್ಣ ರಾಜು, ಕೃಷ್ಣ, ಹೈದರ್ ಅಲಿ, ಮುನ್ನ, ಅಕ್ಬರ್ ಅಲಿ, ಅಸ್ಲಾಂ ಪಾಶ, ಜೀಶನ್, ಇಲಿಯಾಸ್ ಪಾಶ, ಶಕೀಲ್, ಕಾಂತರಾಜು, ಸೋಮಣ್ಣ ಇತರರು ಹಾಜರಿದ್ದರು.