ಪ್ರತಿನಿಧಿ ವರದಿ ಹುಣಸೂರು
ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ, ೨೦೨೪-೨೫ನೇ ಸಾಲಿಗಾಗಿ ಎಷ್ಟು ಸಂಖ್ಯೆಯಲ್ಲಿ ಜೈವಿಕ ಇಂಧನಗಳ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿದೆ ಎಂಬ ಕುರಿತು ಮಾಹಿತಿ ಕೋರಲಾಗಿದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಡಾ.ಎಸ್.ಶ್ರೀಕಾಂತ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿಯು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳ ನೆರವಿನೊಂದಿಗೆ ಹಸಿರು ಹೊನ್ನು, ಬರಡು ಬಂಗಾರ ಯೋಜನೆಯಡಿ ಜಿಲ್ಲೆಯಲ್ಲಿ ಜೈವಿಕ ಇಂಧನಗಳ ಸಸಿಗಳಾದ ಹೊಂಗೆ, ಹಿಪ್ಪೆ, ಬೇವು, ಸೀಮರೂಬ, ಸುರಹೊನ್ನೆ ಮುಂತಾದ ಜೈವಿಕ ಇಂಧನ ಗಿಡಗಳನ್ನು ೨೦೨೪-೨೫ನೇ ಸಾಲಿನಲ್ಲಿ ರೈತರನ್ನು ಪ್ರೆರೇಪಿಸಿ ಬೆಳೆಸಲು ಹಾಗೂ ಸರ್ಕಾರಿ ಜಾಗದಲ್ಲಿ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಕಚೇರಿಗಳ ಆವರಣದಲ್ಲಿ ಬೆಳೆಸಲು ಯೋಜನೆಗಳಡಿ ಜೈವಿಕ ಇಂಧನ ಗಿಡಗಳನ್ನು ಈ ಸಾಲಿನ ಮಳೆಗಾಲದಲ್ಲಿ ನೆಡಬೇಕಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ನರ್ಸರಿಗಳಲ್ಲಿ ಈ ಸಾಲಿಗಾಗಿ ಬೆಳೆಸಿರುವ ಜೈವಿಕ ಇಂಧನ ಸಸ್ಯಗಳ ಲಭ್ಯತೆಯು ಯಾವ ಯಾವ ನರ್ಸರಿಗಳಲ್ಲಿ ಎಷ್ಟು ಗಿಡಗಳನ್ನು ಇಲಾಖೆಯ ವಿವಿಧ ವಿಭಾಗಗಳು ಬೆಳಸಿವೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಬೇಕಿದೆ ಎಂದರು.
ದೇಶದ ಆರ್ಥಿಕ ಸಬಲತೆಗೆ ಜೈವಿಕ ಇಂಧನ ಮರಗಳಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆ ತೆಗೆದು ಅದನ್ನು ಡೀಸೆಲ್ ಆಗಿ ಪರಿವರ್ತಿಸಿ ವಾಹನಗಳಿಗೆ ಬಳಸುವ ತಂತ್ರಜ್ಞಾನವನ್ನು ಕರ್ನಾಟಕದಲ್ಲಿ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಭಿವೃದ್ದಿ ಪಡಿಸಿರುವುದರಿಂದ ನರೇಗ ಯೋಜನೆ ಅಡಿಯಲ್ಲಿಯೂ ಈ ಯೋಜನೆಯನ್ನು ರೂಪಿಸಬೇಕಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೧ಊUಓ೪: ಡಾ.ಎಸ್.ಶ್ರೀಕಾಂತ್.