ಗುಂಡ್ಲುಪೇಟೆ : ರೈತರ ಹೋರಾಟದ ಫಲವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಶು ಪಾಲನ ಇಲಾಖೆ ವತಿಯಿಂದ ತಾಲೂಕಿನ ರೈತರ ಜಾನುವಾರುಗಳಿಗೆ ಒಣ ಮೇವುಗಳನ್ನು ತಾಲೂಕು ಮುಖ್ಯ ಪಶು ವೈದ್ಯಧಿಕಾರಿ ಡಾ. ಮೋಹನ್ ಕುಮಾರ್ ನೇತೃತ್ವದಲ್ಲಿ ರೈತರಿಗೆ ವಿತರಿಸಲಾಯಿತು.
ಪಟ್ಟಣ ಹೊರವಲಯದ ಎಪಿಎಂಸಿ ಆವರಣದಲ್ಲಿ ರಿಯಾಯಿತಿ ದರದಲ್ಲಿ ಒಟ್ಟು 11,000 ಕೆಜಿ ಒಣ ಹುಲ್ಲನ್ನು ಮೇವನ್ನು ವಿತರಿಸಿದ್ದು, 211 ರೈತ ಫಲಾನುಭವಿಗಳ ಜಾನುವಾರುಗಳಿಗೆ 5 ರಾಶಿಗಳಿಗೆ 5 ದಿನಕ್ಕೆ ಆಗುವಷ್ಟು ಮೇವನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಗಳನ್ನು ತೆರೆಯುವ ಮೂಲಕ ರೈತರಿಗೆ ತಮ್ಮ ತಮ್ಮ ಹತ್ತಿರ ಭಾಗದಲ್ಲಿ ಒಣ ಮೆವು ಸಿಗಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಪಶು ಪಾಲನ ಇಲಾಖೆಯ ತಾಲೂಕು ಮುಖ್ಯ ಪಶು ವೈದ್ಯಧಿಕಾರಿ ಡಾ.ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.