ಹನೂರು : ಹಗಲು ಸಮಯದಲ್ಲೇ ತೋಟದ ಮನೆಯಲ್ಲಿದ್ದ ಕುರಿ ಹಾಗೂ ಕೋಳಿಗಳ ಮೇಲೆ ಚಿರತೆ ದಾಳಿ ಮಾಡಿ 9 ಕುರಿ 6 ಕೋಳಿ ತಿಂದು ಹಾಕಿರುವ ಘಟನೆ ನಾಗಣ್ಣ ನಗರದಲ್ಲಿ ಜರುಗಿದೆ.
ಹನೂರು ತಾಲೂಕಿನ ಅಜ್ಜೀಪುರ ಸಮೀಪದ ನಾಗಣ್ಣ ನಗರದ ವೇದತ್ತಿ ಕೌಂಡರ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೊಟ್ಟಿಗೆಯಲ್ಲಿದ್ದ 9 ಕುರಿ ಹಾಗೂ 6 ಕೋಳಿಗಳನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
ಭಯಭೀತರಾದ ಜನತೆ ರೈತರು : ಮಂಗಳವಾರ ಮದ್ಯಾಹ್ನ ಜಮೀನಿನ ಮಾಲೀಕ ಕೆಲಸದ ನಿಮಿತ್ತ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಚಿರತೆ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ 9 ಕುರಿ 6 ಕೋಳಿಗಳನ್ನು ಕೊಂದು ತಿಂದಿರುವ ಘಟನೆಯಿಂದ ತೋಟದ ಮನೆಯಲ್ಲಿ ವಾಸವಾಗಿರುವ ರೈತಾಪಿ ವರ್ಗದವರು ಭಯಭೀತರಾಗಿದ್ದಾರೆ.
ಅರಣ್ಯಾಧಿಕಾರಿಗಳ ದೌಡು : ಘಟನ ಸ್ಥಳಕ್ಕೆ ಹನೂರು ಬಫರ್ ವಲಯದ ಡಿ ಆರ್ ಎಫ್ ಒ ಸಾಲನ್ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಕುರಿ ಮತ್ತು ಕೋಳಿ ಕೊಂದಿರುವ ಬಗ್ಗೆ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು ಮತ್ತು ನಿಮಗೆ ಆಗಿರುವ ನಷ್ಟದ ಬಗ್ಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು