ಪ್ರತಿನಿಧಿ ವರದಿ ಹುಲ್ಲಹಳ್ಳಿ
ಭವ್ಯ ಭಾರತದ ಭದ್ರತೆಗೆ ಮತ್ತು ವಿಕಸಿತ ಭಾರತಕ್ಕೆ ಮೋದಿಯವರನ್ನು ಬೆಂಬಲಿಸಲು ನಾವೆಲ್ಲರೂ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಬಿಜೆಪಿ ಮುಖಂಡ ಸಿ.ಎಂ. ಸೋಮಶೇಖರ್ ಕರೆ ನೀಡಿದರು.
ಹುಲ್ಲಹಳ್ಳಿಯಲ್ಲಿ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿ ಮಾತನಾಡುತ್ತ, ವಿಕಸಿತ ಭಾರತ ಕನಸು ನನಸು ಮಾಡಲು ಸಂಕಲ್ಪ ತೊಟ್ಟಿರುವ ಮೋದಿಯವರನ್ನು ನಾವೆಲ್ಲರೂ ಬೆಂಬಲಿಸಬೇಕು. 26 ರಂದು ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎಸ್. ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಜಯಶೀಲನ್ನಾಗಿ ಮಾಡಬೇಕೆಂದರು.
ಗ್ರಾಂಪಂ ಸದಸ್ಯರಾದ ಶಿವಣ್ಣ, ಗೋಪಾಲ್ ನಾಯ್ಕ, ಮಲ್ಲಿಕಾರ್ಜುನ, ತಾಪಂ ಮಾಜಿ ಸದಸ್ಯ ಅಣ್ಣಯ್ಯ ಶೆಟ್ಟಿ, ಗ್ರಾಂಪಂ ಮಾಜಿ ಅಧ್ಯಕ್ಷ ವರದರಾಜು, ಹುಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅಶೋಕ್, ಪಿಎಸಿಸಿ ಬ್ಯಾಂಕ್ ನಿರ್ದೇಶಕ ತುಕಾರಾಂ, ಶಿವಲಿಂಗ ನಾಯ್ಕ, ಮಂಜಣ್ಣ, ದಿಲೀಪ ಇನ್ನಿತರರು ಹಾಜರಿದ್ದರು.