ಗುಂಡ್ಲುಪೇಟೆ : ನೇಹಾ ಹಾಗೂ ರುಕ್ಸಾನ ಯುವತಿಯರ ಬರ್ಬರ ಹತ್ಯೆಯನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ತಡ ಮಾಡದೆ ವಹಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ಸಂಘಟನೆ ಜಿಲ್ಲಾಧ್ಯಕ್ಷ ಮೋಹನ್ ಸೇರಿದಂತೆ ಪದಾಧಿಕಾರಿಗಳ ನೇತೃತ್ವದಲ್ಲಿ ತಹಸೀಲ್ದಾರ್ ಮಂಜುನಾಥ್ಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಕರವೇ (ಪ್ರವೀಣ್ ಶೆಟ್ಟಿ ಬಣ) ಪದಾಧಿಕಾರಿಗಳು, ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಮೋಹನ್ ಮಾತನಾಡಿ, ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಫಯಾಜ್ ಎಂಬ ವ್ಯಕ್ತಿಯು ಕಾಲೇಜು ಆವರಣದಲ್ಲೇ ಹಾಡುಹಗಲೇ ಹತ್ಯೆ ಮಾಡಿರುವುದು ಹಾಗೂ ರುಕ್ಷಾನ ಎಂಬ ಯುವತಿಯನ್ನು ಪುದೀಪ್ ಎಂಬ ಯುವಕ ಪ್ರೀತಿಯ ನಾಟಕವಾಡಿ ಕೊಲೆ ಮಾಡಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ರೀತಿಯಲ್ಲಿ ಅದಗೆಟ್ಟು ಹೋಗಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಅವರ ಹಾಕಿದರು. ರಾಜ್ಯ ಸರ್ಕಾರವು ಆರೋಪಿಗಳ ವಿಚಾರಣೆಯನ್ನು ಶೀಘ್ರವಾಗಿ ಮುಗಿಸಿ ಕೊಲೆ ಗಡುಕರಿಗೆ ಗಲ್ಲು ಶಿಕ್ಷೆ ಕೊಡುವ ಹಾಗೆ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು. ಹತ್ಯೆಗೆ ಒಳಗಾದ ಕುಟುಂಬಗಳಿಗೆ ಸರ್ಕಾರಿ ಕೆಲಸ ಕೊಡಬೇಕು ಹಾಗೂ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮಂಜುನಾಥ್ ಅವರಿಗೆ ಜಿಲ್ಲಾ ಅಧ್ಯಕ್ಷರಾದ ಆರ್.ಮೋಹನ್ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಂಜುನಾಥ್, ನಿಮ್ಮ ಈ ಮನವಿಯನ್ನು ಈ ಕೂಡಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯಪಾಲರಿಗೆ ರವಾನಿಸುತ್ತೇನೆ ಎಂದು ತಿಳಿಸಿದರು.
ಕರವೇ (ಪ್ರವೀಣ್ ಶೆಟ್ಟಿ ಬಣದ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ, ಜಿಲ್ಲಾ ಉಪಾಧ್ಯಕ್ಷ ನಾಗೇಶ್ ನಾಯಕ್, ತಾಲೂಕು ಅಧ್ಯಕ್ಷ ಹತ ಮಂಜು. ಆರ್. ಉಪಾಧ್ಯಕ್ಷ ಮಣಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಸಂಚಾಲಕ ದೊರೆಸ್ವಾಮಿ, ಪ್ರದ ಕಾರ್ಯದರ್ಶಿ ರಾಜೇಶ್ ಬೆಟ್ಟದ ಮಾದಹಳ್ಳಿ, ರಂಗಸ್ವಾಮಿ, ಕುಮಾರ್, ಪ್ರವೀಣ್ ನಾಯಕ್, ಅಪ್ಪುಹಾಜರಿದ್ದರು.
ಫೋಟೋ ಇದೆ