ಪ್ರತಿನಿಧಿ ವರದಿ ಚಾಮರಾಜನಗರ : ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಈ ಬಾರಿ ಮತದಾರರು ಬಿಜೆಪಿಯ ಕೈ ಹಿಡಿಯಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಮನವಿ ಮಾಡಿದರು.
ನರೇಂದ್ರಮೋದಿ ಅವರ ಸಾಧನೆಗಳು ಮೂರನೇ ಅವಧಿಗೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೂರನೇ ಅವಧಿಯಲ್ಲಿ ದೇಶದ ಆರ್ಥಿಕತೆ ಹೆಚ್ಚಾಗಲಿದೆ. 2029ಕ್ಕೆ ದೇಶದ ಪ್ರತಿ ವ್ಯಕ್ತಿಯ ತಲಾ ಆದಾಯ 1,500 ರೂ.ಗೆ ತಲುಪಲಿದೆ. ನರೇಂದ್ರ ಮೋದಿ ಅವರು ದೇಶದ ಪ್ರತಿ ಮನೆ ಮನೆಗಳ ಮೇಲೂ ಸೋಲಾರ್ ಅಳವಡಿಕೆಗೆ ಚಿಂತನೆ ನಡೆಸಿದ್ದಾರೆ. ಹೀಗಾದರೆ ಉಚಿತ ವಿದ್ಯುತ್ ಆಗತ್ಯವೇ ಇರುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ನರೇಂದ್ರ ಮೋದಿ ಅವರ ಚಿಂತನೆಯಂತೆ ಅಭಿವೃದ್ದಿ ಯೋಜನೆಗಳು ಜಾರಿಯಾದ ಕೂಡಲೇ ಜನರು ಉಚಿತ ಸ್ಕೀಮ್ ಗಳನ್ನು ಕೇಳುವುದನ್ನು ಬಿಡುತ್ತಾರೆ. ಆಗ ಸುಲಲಿತವಾಗಿ ಬದುಕುವ ಮಾರ್ಗ ನಿರ್ಮಾಣವಾಗಲಿದೆ. ಭ್ರಷ್ಟಾಚಾರ ರಹಿತ ಆಡಳಿತ, ನಿಸ್ವಾರ್ಥ ಸೇವೆ ನರೇಂದ್ರ ಮೋದಿಯ ಉದ್ದೇಶವಾಗಿದೆ. ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಹೀಗಾಗಿ ಮೋದಿ ಅವರಿಗೆ ಈ ಬಾರಿ ಅವಕಾಶ ಕೊಡುವ ಜತೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಬಾಲರಾಜು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖಂಡರಾದ ಫಣೀಶ್, ಪರಿಕ್ಷಿತ್ ರಾಜ್ಅರಸ್, ಎಂ.ರಾಮಚಂದ್ರ, ನೂರೊಂದುಶೆಟ್ಟಿ ಕಾಡಳ್ಳಿ ಕುಮಾರ್ ಇದ್ದರು.
Leave a comment