ಡಾ.ರಮೇಶ್ ಕುಮಾರ್ ಮೈಸೂರಿಗೆ ವರ್ಗಾವಣೆ
ಪ್ರತಿನಿಧಿ ವರದಿ ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತಾರಣ್ಯದಿಂದ ವರ್ಗಾವಣೆಗೊಂಡಿದ್ದ ಡಾ.ರಮೇಶ್ ಕುಮಾರ್ ಅವರನ್ನು ಮೈಸೂರು ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ರಾಗಿದ್ದ ಡಾ.ರಮೇಶ್ ಕುಮಾರ್ ಅವರು ವರ್ಗಾವಣೆಗೊಂಡು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದರು. ಏ.19ರಂದು ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಕೇಡರ್ ಹುದ್ದೆಗೆ ಸಮಾನವಾಗಿರುವ ಮೈಸೂರು ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ರಮೇಶ್ ಕುಮಾರ್ ಅವರನ್ನು ರಾಜ್ಯ ಅರಣ್ಯ ಇಲಾಖೆ ನಿಯೋಜಿಸಲಾಗಿದೆ.
25ಸಿಎಚ್ಎನ್.6:
ಚಿತ್ರವಿದೆ
ಮತದಾನಕ್ಕೆ ಕೆಲವೇ ಗಂಟೆಗಳ ಅಂತರ ನಡುವೆ ಬಿಜೆಪಿ ಅಭ್ಯರ್ಥಿ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಮನೆ ಮನೆಗೆ ತೆರಳಿ ಮತಯಾಚಿಸಿದ್ರು.ಕುವೆಂಪು ನಗರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ ಲಕ್ಷ್ಮೀನಾರಾಯಣ್ ನಿವಾಸದಲ್ಲಿ ಮತಯಾಚಿಸಿದ ಸಂದರ್ಭದಲ್ಲಿ ಪ್ರೋ ಶ್ರೀಮತಿ ಲಕ್ಷ್ಮೀ ದೇವಿ ,ಪ್ರೋ ಪ್ರಧಾನಗುರುದತ್ತ್ ದಂಪತಿಗಳು, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಹಾಜರಿದ್ರು. ಯದುವೀರ್ ರೊಂದಿಗೆ ಶಾಸಕ ಶ್ರೀವತ್ಸ,ರಾಜ್ಯ ಬಿಜೆಪಿ ಓಬಿಸಿ ಮೊರ್ಚಾ ಅಧ್ಯಕ್ಷ ರಘು ಕೌಟಿಲ್ಯ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಇನ್ನಿತರ ಮುಖಂಡರು ಭಾಗಿ