ಮೈಸೂರು: ಕರ್ನಾಟಕ ಲೋಕಾಯುಕ್ತ ಇಲಾಖೆಯ ಮೈಸೂರು ವಿಭಾಗದ ಅಧಿಕಾರಿಗಳಿಂದ ದೂರು ಸ್ವೀಕರಿಸುವ ಕಾರ್ಯಕ್ರಮವನ್ನು ಮೇ.8ರಂದು ಎಚ್.ಡಿ.ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಕರ್ತವ್ಯ ಲೋಪವೆಸಗುವ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ದೂರು ನೀಡುವುದರ ಮೂಲಕ ಕಾನೂನು ಕ್ರಮ ತೆಗೆದುಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಪೊಲೀಸ್ ಅಧಿಕ್ಷಕ ಸಜೀತ್ ತಿಳಿಸಿದ್ದಾರೆ.
=================
ನಾಳೆ ‘ರಜಾ-ಮಜಾ’ ಸಮಾರೋಪ
ಮೈಸೂರು: ಮಂಡ್ಯ ರಮೇಶ ಅವರ ನಟನರಂಗ ಶಾಲೆಯ ರಜಾ-ಮಜಾ ಬೇಸಿಗೆ ಶಿಬಿರದ ಸಮಾರೋಪ ಮೇ 5ರಂದು ಸಂಜೆ 4ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿದೆ. ಮೈಸೂರು ಮತ್ತು ಇತರ ಕಡೆಯ ಸುಮಾರು 300 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಹಿರಿಯ ರಂಗಕರ್ಮಿ ಪ್ರೊ. ಲಕ್ಷ್ಮಿ ಚಂದ್ರಶೇಖರ್, ನಟರಾದ ಅಶ್ವತ್ ಯಾಚೇನಹಳ್ಳಿ, ಕುರಿ ಪ್ರತಾಪ್, ಭಾಗ್ಯಲಕ್ಷ್ಮಿ ತಾಂಡವ್ ಖ್ಯಾತಿಯ ಸುದರ್ಶನ್ ರಂಗಪ್ರಸಾದ್, ಜೀ ಕನ್ನಡ ನಾನ್ ಫಿಕ್ಷನ್ ಹೆಡ್ ಹಾಗೂ ಜೀ ಪಿಚ್ಚರ್ ಮುಖ್ಯಸ್ಥ ಶರಣಯ್ಯ, ಸಿನಿಮಾ ತಾರೆ ಸಂಗೀತಾ ಭಟ್. ನಟನದ ಅಧ್ಯಕ್ಷ ಕೆ.ಎಸ್.ಆನಂದ್ ಬಾಬು ಹಾಗೂ ಸುಪ್ರೀಮ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ರವೀಂದ್ರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ನಟನದ ಸಂಸ್ಥಾಪಕ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ಈ ಬಾರಿಯ ನಟನ ಪುರಸ್ಕಾರ- 2024 ಅನ್ನು ವೃತ್ತಿರಂಗಭೂಮಿಯ ಹಿರಿಯ ನಟಿ ಎಚ್.ಟಿ.ಇಂದಿರಮ್ಮ ಅವರಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಮಕ್ಕಳು ಶಿಬಿರದುದ್ದಕ್ಕೂ ಅಭ್ಯಸಿಸಿದ ಎಲ್ಲ ಕಲಾ ಪ್ರಕಾರಗಳ ಪ್ರದರ್ಶನವೂ ನಡೆಯಲಿದೆ. ಉಚಿತ ಪ್ರವೇಶವಿದ್ದು. ಮೊ. 7259537777, 9480468327, 9845595505 ಸಂರ್ಪಕಿಸಬಹುದು.