ಮೈಸೂರು: ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಪೆನ್ ಡ್ರೈವ್ ಕೇಸ್ ನಿಂದಾಗಿ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ತುಂಬೆಲ್ಲ ಮೈತ್ರಿಯದ್ದೇ ಚರ್ಚೆಯಾಗುತ್ತಿದ್ದು, . ಮೇ 9ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಮೇ 16ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ನಡುವೆ ಮೈತ್ರಿ ಮುಂದುವರಿಕೆ ಬಗ್ಗೆ ಉಭಯ ಪಕ್ಷಗಳಲ್ಲೂ ಗೊಂದಲ. ಉಂಟಾಗಿದ್ದು, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಸ್ಪರ್ಧಾಕಾಂಕ್ಷಿಗಳಿಗೆ ಪೀಕಲಾಟ ತಂದಿಟ್ಟಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಎಂಎಲ್ಸಿ ಮರಿತಿಬ್ಬೇಗೌಡ ಅಭ್ಯರ್ಥಿಯಾಗಿದ್ದು, ಶ್ರೀಕಂಠೇಗೌಡ, ವಿವೇಕಾನಂದ ಇವರು ಜೆಡಿಎಸ್ ನಿಂದ ಟಿಕೆಟ್ ಕೇಳಿದ್ದಾರೆ. ಬಿಜೆಪಿ ಟಿಕೆಟ್ ಗೆ ಮೈಸೂರಿನ ಇ.ಸಿ.ನಿಂಗರಾಜೇಗೌಡ, ಮಂಡ್ಯದ ರಾಜು, ಹಾಸನದ ಯೋಗೇಂದ್ರ ನಡುವೆ ಪೈಪೋಟಿಯಿದೆ. ಇನ್ನು ಆಕಾಂಕ್ಷಿಗಳು ಮೈತ್ರಿ ಮುಂದುವರಿಕೆಯ ನಿರೀಕ್ಷೆಯಲ್ಲಿ ಸಿದ್ಧತೆ ನಡೆಸಿದ್ದರು. ಆದರೆ ಇದೀಗ ಬಿಜೆಪಿ- ಜೆಡಿಎಸ್ ದೋಸ್ತಿ ಗೊಂದಲದ ಗೂಡಾಗಿದೆ. ಲೋಕಸಭೆ ಚುನಾವಣೆ ಆರಂಭದಲ್ಲಿ ಶುರುವಾದ ಮೈತ್ರಿ, ಚುನಾವಣೆ ಮುಕ್ತಾಯವಾಗುವ ಹೊತ್ತಿಗೆ ಅಂತ್ಯ ಆಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.