ಕೋಲಾರ: ತಾಲೂಕಿನ ನರಸಾಪುರ ಹೋಬಳಿ ಕೆ.ಬಿ.ಹೊಸಹಳ್ಳಿ ಗ್ರಾಮದ ಸರ್ವೇ ನಂ.110 ಹಾಗೂ 130 ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಕೆ.ಬಿ.ಹೊಸಹಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರು ಕೆಲವು ಪ್ರಭಾವಿಗಳಾದ ಬಯ್ಯಣ್ಣ, ನಂದೀಶ್ ಗೌಡ, ಅಬ್ದುಲ್ ರಹಮಾನ್, ಜಯರಾಮರೆಡ್ಡಿ
ಸುಮಾರು 30 ವರ್ಷಗಳಿಂದ ನಡೆಯುತ್ತಿರುವ .ಗಣಿಗಾರಿಕೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಹಾಗೂ ಗ್ರಾಮದ ಮನೆಗಳಿಗೆ ಬೆಳೆಗಳಿಗೆ ಹಾನಿಯಾಗಿದೆ. ಇದರ ಬಗ್ಗೆ ಭೂ ವಿಜ್ಞಾನ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದ್ದರೂ ಸಹ ಕ್ರಮ ಕೈಗೊಂಡಿಲ್ಲವೆಂದು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸುಮಾರ 120 ಅಡಿ ಆಳದವರೆಗೆ ನಡೆಯುತ್ತಿರುವ ಗಣಿಗಾರಿಕೆಯಿಂದ ಆಳದಲ್ಲಿ ಮಳೆ ನೀರು ತುಂಬಿಕೊಂಡು ಜಾನುವಾರುಗಳು ಸಾವನ್ನಪ್ಪಿವೆ, ಮಧ್ಯದಲ್ಲಿ ರಸ್ತೆ ಲಾರಿ, ಟಿಪ್ಪರ್ಗಳಲ್ಲಿ ಕಲ್ಲು ಸಾಗಿಸುವ ವೇಳೆ ಕಲ್ಲುಗಳು ಕೆಳಕ್ಕೆ ಬಿದ್ದು ಹಲವಾರು ಜನರಿಗೆ ಗಾಯಗಳಾಗಿವೆ ಘಟನೆಗಳು ನಡೆದಿವೆ ಹಾಗೂ ಕಲ್ಲು ತೆಗಯಲು ಸಿಡಿ ಮದ್ದು ಸಿಡಿಸುವ ಮನೆ ಗೋಡೆಗಳು ಜಖಂ ಆಗುತ್ತಿವೆ ಎಂದು ವಿವರಿಸಿದರು.
ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಾಗ ಆಗಮಿಸಿದ್ದ ಅಧಿಕಾರಿಗಳು ಚುನಾವಣೆ ನಂತರ ಸಮಸ್ಯೆ ಪರಿಹಾರ ಮಾಡುವುದಾಗಿ ಹೇಳಿ ಹೋದವರು ಇದುವರೆಗೆ ನಮ್ಮ ಸಮಸ್ಯೆ ಬಗೆಹರಿಸಿಲ್ಲ ಗಣಿಗಾರಿಕೆ ನಿಲ್ಲಿಸಿ ಗ್ರಾಮದ ಜನತೆಯ ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಇಲ್ಲವೆ ನಮ್ಮ ಗ್ರಾಮವನ್ನು ಬೇರೆ ತಾಲ್ಲೂಕಿಗೆ ಸ್ಥಳಾಂತರ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕೆ.ಬಿ.ಹೊಸಹಳ್ಳಿ ಗ್ರಾಮಸ್ಥರಾದ ವಕೀಲ ನಾಗರಾಜ, ಶ್ರೀರಾಮ್,
ರವಿಕುಮಾರ್, ಮಂಜುನಾಥ್ ಗೌಡ, ಪ್ರಕಾಶ್, ಚಂದ್ರಪ್ಪ ಮತ್ತಿತರರು ಇದ್ದರು.