ಪ್ರತಿನಿಧಿ ವರದಿ ಬೇಲೂರು
ತಾಲೂಕಿನ ಅರೇಹಳ್ಳಿ ಹೋಬಳಿಯ ಮದ್ವಾಪುರ ಹಾಗೂ ಮಾಲೂರು ಗ್ರಾಮದಲ್ಲಿ ಅಕ್ರಮವಾಗಿ ಶೇಖರಿಸಿದ್ದ ಸುಮಾರು ೮೦ ಟನ್ ಮರಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.
ಮದ್ವಾಪುರ ಸರ್ವೇ ನಂ.೨೯, ೩೦ ಹಾಗೂ ಸರ್ವೇ ನಂ.೬೨ರಲ್ಲಿ ಯಗಚಿ ನದಿಯ ಹಿನ್ನೀರಿನಿಂದ ಸುಮಾರು ೮೦ ಟನ್ ಅಷ್ಟು ಮರಳನ್ನು ಅಕ್ರಮವಾಗಿ ಶೇಖರಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಎಂ.ಮಮತಾ ಹಾಗೂ ಭೂ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ವೆಂಕಟೇಶ್ ಅವರು ಸ್ಥಳಕ್ಕೆ ಆಗಮಿಸಿ ಮರಳನ್ನು ವಶಕ್ಕೆ ಪಡೆದು, ಪಿಡಬ್ಲ್ಯೂಡಿ ಇಲಾಖೆ ಸುಪರ್ದಿಗೆ ನೀಡಿದರು.
ಅಸಮಾಧನ ವ್ಯಕ್ತಪಡಿಸಿದ ಅಧಿಕಾರಿಗಳಿಗೆ
ಮರಳು ದಂಧೆಯಲ್ಲಿ ಭಾಗಿಯಾಗಿರುವವರ ಒತ್ತಡಕ್ಕೆ ಯಾರೂ ಸಹ ಇಲ್ಲಿಂದ ಮರಳನ್ಜು ಸಾಗಿಸಲು ಟಿಪ್ಪರ್ ಹಾಗೂ ಜೆಸಿಬಿಯನ್ನು ಕಳುಹಿಸಿಕೊಡುತ್ತಿಲ್ಲ. ಇವರ ಮೇಲೆ ನಾವು ಮುಲಾಜಿಲ್ಲದೆ ನಮ್ಮ ಕೆಲಸಕ್ಕೆ ಅಡ್ಡಿಪಡಿಸಯವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಬೇಲೂರು ಹಾಗೂ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
ಮಂಗಳವಾರ ಬೆಳಗಿನ ಜಾವ ೨ ಗಂಟೆಯವರೆಗೂ ತಹಸೀಲ್ದಾರ್ ಹಾಗೂ ಭೂಗಣಿ ಇಲಾಖೆಯ ಅಧಿಕಾರಿ ಸ್ಥಳದಲ್ಲೇ ಇದ್ದು, ವಶಪಡಿಸಿಕೊಂಡ ಮರಳನ್ನು ಪಿಡಬ್ಲ್ಯೂಡಿ ಇಲಾಖೆಗೆ ರವಾನಿಸಿದರು.
ಕಂದಾಯ ಇಲಾಖೆ ನಿರೀಕ್ಷಕ ಚಂದ್ರೇಗೌಡ ಹಾಗೂ ಗ್ರಾಮ ಸಹಾಯಕ ಗಿರೀಶ್ ಹಾಜರಿದ್ದರು.