ಪ್ರತಿನಿಧಿ ವರದಿ ಹಾಸನ
ಯಾರು ಹೆಚ್ಚು ವಿಷಯಗಳನ್ನು ಗ್ರಹಿಸುವ ಗುಣ ಬೆಳೆಸಿಕೊಂಡಿರುತ್ತಾರೊ ಅಂತಹವರು ಜನರ ಮಧ್ಯೆ ನಿಂತು ಮಾತನಾಡುವ ಶಕ್ತಿ ಬೆಳೆಸಿಕೊಂಡು ಬಲಿಷ್ಠ ಪತ್ರಕರ್ತರಾಗುತ್ತಾರೆ ಎಂದು ಮೈಸೂರು ಮಾನಸ ಗಂಗೋತ್ರಿ ಇ.ಎಂ.ಆರ್.ಸಿ. ನಿರ್ದೇಶಕಿ ಪ್ರೋ.ಎಂ.ಎಸ್.ಸಪ್ನ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಮಾಧ್ಯಮ ಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳ ಕುರಿತು ನಡೆದ ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪತ್ರಿಕೋದ್ಯಮದ ಇತಿಹಾಸ ತಿಳಿಯುವುದು ಮುಖ್ಯ. ಪ್ರಸ್ತುತದಲ್ಲಿ ಪ್ರತಿ ವಿಚಾರದಲ್ಲೂ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕಾಗಿದ್ದು, ಹೆಚ್ಚು ಓದಿದಷ್ಟು ಜ್ಞಾನ ಹೆಚ್ಚುತ್ತದೆ. ವಿಷಯಗಳು ತಲೆಯಲ್ಲಿ ಇದ್ದಾಗ ಮಾತ್ರ ಜನರ ಮಧ್ಯೆ ಮಾತನಾಡುವುದಕ್ಕೆ ಸಾಧ್ಯ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯಕ್ತ ಎಂ.ಬಿ.ಚನ್ನಕೇಶವ, ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಪರೀಕ್ಷಾ ನಿಯಂತ್ರಕ ಕೆ.ಡಿ.ಮುರುಳೀಧರ್, ಉಪನ್ಯಾಸಕರಾದ ಎ.ವಿ.ರಶ್ಮಿ, ಎಚ್.ಸಿ.ಭವ್ಯ, ಕೆ.ಎ.ಶೃತಿ ಇದ್ದರು.