ಮಾದಪ್ಪನ ದೇಗುಲದಲ್ಲಿ ಸಹಾಯಕ ಪಾರುಪತ್ತೇಗಾರರಾಗಿ ಹಾಗೂ ಇತರೆ ವಿಭಾಗಗಳಲ್ಲಿ ಸುಮಾರು 34 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪಿ.ಪುಟ್ಟಪ್ಪ ಅವರನ್ನು ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಸಾಲೂರು ಮಠದ ಪೀಠಾದಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಿಬ್ಬಂದಿಗಳಾದ ಸರಗೂರು ಮಹದೇವಸ್ವಾಮಿ, ಎಂ.ಸ್ವಾಮಿ, ಮಾದೇಶ್, ಎಚ್.ಜಿ.ಜನಾರ್ಧನ್, ರವೀಂದ್ರ, ಮಹೇಶ್ ಕುಮಾರ್ ಇದ್ದರು.