ತುಮಕೂರು : ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಧಿಕೃತ ಅಭ್ಯರ್ಥಿ ಎಂದು ಡಿ ಟಿ .ಶ್ರೀನಿವಾಸ್ ರವರನ್ನು ಆಯ್ಕೆ ಮಾಡಲಾಗಿದೆ. ಆದರೆ ತುಮಕೂರು ಗ್ರಾಮಾಂತರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಪಕ್ಷೇತರ ಅಭ್ಯರ್ಥಿ ಶಿವರಾಜು ಅವರ ಪರ ಕೆಲಸ ಮಾಡುತ್ತಿರುವ ಹಾಲುನೂರು ಲೇಪಾಕ್ಷ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣ ಪ್ರದಾನ ಕಾರ್ಯದರ್ಶಿ ಸೈಯದ್ ಸಾದದ್ ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಮೊದಮೊದಲು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ರವರ ಪರ ಪ್ರಚಾರ ಮಾಡಿದರು. ಆಗ ಪ್ರಶ್ನೆ ಮಾಡಿದರೆ ರುಪ್ಸಾ ಸಂಘಟನೆ ನಿಯಮದಂತೆ ಪ್ರಚಾರ ಮಾಡುತ್ತಿದೇನೆ ಎಂದು ಸಮಜಾಯಿಷಿ ನೀಡಿರುತ್ತಾರೆ ನಂತರ ಈಗ ಶಿವರಾಜು ಪರ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಲುನೂರು ಲೇಪಾಕ್ಷ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ, ಸಚಿವ ಕೆ ಎನ್ ರಾಜಣ್ಣ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪಕ್ಷದಿಂದ ಹೊರಹಾಕ ಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ ಇಂತಹ ಪಕ್ಷ ಕ್ಕೆ ಜೆಡಿಎಸ್ ನಲ್ಲಿದ ಮಾಜಿ ಶಾಸಕ ಗೌರಿಶಂಕರ್ ಮತ್ತು ಬೆಂಬಲಿಗರು ಬಂದು ಇನ್ನೂ ಜೆಡಿಎಸ್ ನ ಮೈಂಡ್ ಸೇಟ್ ಇಟ್ಟುಕೊಂಡವರೇ. ಗೌರಿಶಂಕರ್ ಹಿಂಬಾಲಕರು, ಪಕ್ಷಕ್ಕೆ ಮುಜ್ಜುಗರ ತರುವ ಕೆಲಸ ಮಾಡಬೇಡಿ, ಇದರಿಂದ ಮೂಲ ಕಾಂಗ್ರೆಸ್ ನವರಿಗೆ ನೋವಾಗುತ್ತಿದೆ.ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ, ಎಂದಿರುವ ಸೈಯದ್ ಸಾದದ್
ನಿಷ್ಟವಂತ ಕಾರ್ಯ ಕರ್ತರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕು. ಹಾಲುನೂರು ಲೇಪಾಕ್ಷಿ ಅವರನ್ನು ಪಕ್ಷದಿಂದ ಹೊರ ಹಾಕಬೇಕು, ಹಾಕದಿದ್ದರೆ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಇದೇ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ರಘಕುಮಾರ್, ಹರ್ಷ, ಹಾಜರಿದ್ದರು.