- ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ಯುವಕ ಬಾನುಪ್ರಸಾದ್ರೆಡ್ಡಿ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಅಯೋಧ್ಯೆಯ ಶ್ರೀರಾಮನ ದರ್ಶನ ಮಾಡಲು ೨೨ವರ್ಷದ ಯುವಕನೊಬ್ಬ ಗುರುವಾರ ಸೈಕಲ್ ಏರಿ ಅಯೊಧ್ಯೆ ಕಡೆಗೆ ಪಯಣ ಬೆಳೆಸಿದ್ದಾನೆ.
ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ನರಸಿಂಹರೆಡ್ಡಿ, ಜಯಲಕ್ಷ್ಮಮ್ಮ ಅವರ ಪುತ್ರ ಬಾನುಪ್ರಸಾದ್ರೆಡ್ಡಿ(೨೨) ಸೈಕಲ್ ಮೂಲಕ ಅಯೋಧ್ಯೆಯ ರಾಮನ ದರ್ಶನದ ಸಾಹಸಕ್ಕೆ ಕೈ ಹಾಕಿದ್ದಾನೆ. ಅಯೋಧ್ಯೆಗೆ ತೆರಳುವ ಮುನ್ನ ಮಂಚೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿದರು.
ಬಾನುಪ್ರಸಾದ್ರೆಡ್ಡಿ ಮಾತನಾಡಿ, ಅಯೋಧ್ಯೆಗೆ ಬೈಕ್, ರೈಲು ಸೇರಿ ಬೇರೆ-ಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನನಗೆ ಸೈಕಲ್ ಮೂಲಕವೇ ಅಯೋಧ್ಯೆಗೆ ಹೋಗಲು ಇಷ್ಟ. ಇದನ್ನು ನಿರ್ಧರಿಸಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಿಂದ ಅಯೋಧ್ಯೆಗೆ ಸುಮಾರು ೧೮೦೦ ಕಿ.ಮೀಗೂ ಅಧಿಕ ದೂರವಿದ್ದು, ಒಂದು ತಿಂಗಳೊಳಗೆ ಅಯೋಧ್ಯೆಗೆ ತೆರಳಬೇಕೆಂದು ಪಣ ತೊಟ್ಟಿರುವೆ. ಮಂಚೇನಹಳ್ಳಿ ಮೂಲಕ ಡಿ.ಪಾಳ್ಯ, ಲೇಪಾಕ್ಷಿ ಮಾರ್ಗವಾಗಿ ತೆರಳುವುದಾಗಿ ಅಯೋಧ್ಯೆಗೆ ಪ್ರಯಾಣ ಬೆಳೆಸುವೆ ಎಂದರು.
ಶಿಕ್ಷಕ ಸುರೇಶ್ , ಮುಖಂಡರಾದ ಸುದರ್ಶನರೆಡ್ಡಿ, ಭರತ್ ರೆಡ್ಡಿ, ನರಸಿಂಹರೆಡ್ಡಿ, ರಮೇಶ್, ಮುನಿರಾಜು ಇದ್ದರು.