ಮೈಸೂರು: ಅಂಗನವಾಡಿ ಕಾರ್ಯಕರ್ತರನ್ನು ಕರೆದುಕೊಂಡು ಪ್ರತಿಭಟನೆ ಮಾಡುತ್ತಾರೆ. ಯಾವ ಭಾಗದಿಂದ ಎಷ್ಟು ಮಹಿಳೆಯರನ್ನು ಕರೆದುಕೊಂಡು ಬರಬೇಕು ಅಂತ ಹೇಳಿದ್ದಾರೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆ ಮಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಪಿರಿಯಾಪಟ್ಟಣದಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತರನ್ನು ಕರೆದುಕೊಂಡು ಪ್ರತಿಭಟನೆ ಮಾಡಬೇಕ ? ನಿಮಗೆ ಆಗಲ್ವ ಹೇಳಿ, ನಾನೇ ಮಹಿಳೆಯರ ಸಂಘಟನೆ ಮಾಡಿಕೊಡುತ್ತೇನೆ. ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಸಿಎಂ ಗೆ ಇಲ್ಲ. ಈ ಹಿಂದೆ ಬಿಜೆಪಿ ಬಗ್ಗೆ ಭ್ರಷ್ಟಾಚಾರ 40% ಅಂತ ಮಾತನಾಡಿದರು. ಈಗ ಅವರದೇ ಸರ್ಕಾರವಿದೆ. ಸಂಪೂರ್ಣ ಭ್ರಷ್ಟಚಾರ ನಿಲ್ಲಿಸೋದಕ್ಕೆ ಆಗಲ್ಲ. ಕಡಿಮೆ ಮಾಡುತ್ತೇವೆ ಎನ್ನುತ್ತಾರೆ. ಇದು ಇವರ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾಡಿದ್ದಾರೆ.