ಮೈಸೂರು: ಪ್ರಜ್ವಲ್ ನಿಂದ ದೇವೇಗೌಡರ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯ. ನಾನು ಈಗಾಗಲೇ ಹೇಳಿದ್ದೇನೆ. ತಪ್ಪು ಮಾಡಿಲ್ಲ ಅಂದ್ರೆ ಬಂದು ತನಿಖೆ ಎದುರಿಸು. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣೆ 4 ದಿನದ ಮುಂಚೆ ಪೆನ್ ಡ್ರೈವ್ ಹಂಚಿದ್ದಾರೆ. ಪಾಪ ಮಹಿಳೆಯರ ಮುಖಗಳನ್ನು ಬ್ಲರ್ ಕೂಡ ಮಾಡಿಲ್ಲ. ಆ ಹೆಣ್ಣು ಮಕ್ಕಳ ಕುಟುಂಬದ ಪಾಡೇನು ? ಪ್ರಜ್ವಲ್ ಗೆ ನಿಮ್ಮ ಮೂಲಕ ಈಗಲೂ ಹೇಳ್ತಿದೀನಿ. ಈ ವಿಚಾರದಲ್ಲಿ ಯಾವ ಲಾಯರ್ ಮಾತು ಕೇಳಬೇಡ. ಮತ್ತೆ ಹೇಳುತ್ತಿದ್ದೇನೆ ಬಂದು ತನಿಖೆ ಎದುರಿಸು ಎಂದು ಮೈಸೂರಿನಲ್ಲಿ ಮತ್ತೆ ಪ್ರಜ್ವಲ್ ರೇವಣ್ಣಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.