ಮೂರ್ನಾಡು ಪ್ರಥಮ ದರ್ಜೆ ಕಾಲೇಜು ರನ್ನರ್ ಅಪ್ : ರಾಜ್ಯ ಮಟ್ಟದ ಅಂತರ ಪದವಿ ಕಾಲೇಜು ಟೂರ್ನಿ
ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ವಿರಾಜಪೇಟೆ ಸೆಂಟ್ ಆನ್ಸ್ ಕಾಲೇಜು ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಅಂತರ ಪದವಿ ಕಾಲೇಜು ಟೂರ್ನಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು (ಎ) ತಂಡ ಚಾಂಪಿಯನ್ ಸ್ಥಾನ ಅಲಂಕರಿಸಿದ್ದು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು (ಎ) ತಂಡಕ್ಕೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ.
ಬುಧವಾರ ನಡೆದ ಫೈನಲ್ ಹಣಾಹಣಿಯಲ್ಲಿ ರೋಚಕ ಆಟ ಪ್ರದರ್ಶನಗೊಂಡಿತು. ಟೈಬ್ರೇಕರ್ನಲ್ಲಿ ಎಫ್ಎಂಸಿ ತಂಡವು 6-5 ಗೋಲುಗಳಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕಿತು. ಪಂದ್ಯದ ನಿಗದಿತ ಸಮಯದಲ್ಲಿ ಸಮಬಲದ ಹೋರಾಟದಿಂದಾಗಿ ಉಭಯ ತಂಡಗಳು 3-3 ಗೋಲುಗಳೊಂದಿಗೆ ಟೈ ಮಾಡಿಕೊಂಡಿತು. ಪೆನಾಲ್ಟಿ ಶೂಟೌಟ್ ಮೂಲಕ ಎಫ್ಎಂಸಿ ಗೆದ್ದು ಬೀಗಿತು. ಎಫ್ಎಂಸಿ ಪರವಾಗಿ ಪ್ರಜ್ವಲ್, ಕವನ್, ನಾಣಯ್ಯ ತಲಾ ಒಂದೊಂದು ಗೋಲು ಸಿಡಿಸಿದರು. ಮೂರ್ನಾಡು ಪರ ಸುಬ್ರಮಣಿ 2 ಗೋಲು, ಎಂ.ಬಿ. ದೇವಯ್ಯ 1 ಗೋಲು ಹೊಡೆದರು.
ಮೊದಲ ಸೆಮಿ ಫೈನಲ್ನಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವು ವಿರಾಜಪೇಟೆ ಕಾವೇರಿ ಕಾಲೇಜು (ಎ) ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಮೂರ್ನಾಡು ಪರ ಸುಬ್ರಮಣಿ, ಎಂ.ಬಿ.ದೇವಯ್ಯ ತಲಾ ಒಂದೊಂದು ಗೋಲುಗಳ ನೆರವಿನಿಂದ ಗೆದ್ದು ಬೀಗಿತು. ಕಾವೇರಿ ಕಾಲೇಜು ಗೋಲು ಗಳಿಸಲಾಗದೆ ಫೈನಲ್ ಪ್ರವೇಶ ಕೈಚೆಲ್ಲಿಕೊಂಡಿತು.
ಎರಡನೇ ಸೆಮಿ ಫೈನಲ್ನಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ತಂಡವು ವಿರಾಜಪೇಟೆ ಕಾವೇರಿ ಕಾಲೇಜು (ಬಿ) ತಂಡದ ವಿರುದ್ದ 3-0 ಗೋಲುಗಳಿಂದ ಗೆದ್ದು ಬೀಗಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಆಟಗಾರ ಪ್ರಜ್ವಲ್ 3 ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚು ಹರಿಸಿದರು.
ಕುಪ್ಪಂಡ ದಿಲನ್ ಬೋಪಣ್ಣ, ಕೋಡಿಮಣಿಯಂಡ ಅಪ್ಪಣ್ಣ, ಅಪ್ಪುಮಣಿಯಂಡ ಅಯ್ಯಪ್ಪ, ಕಾಳಿಮಾಡ ಕಿರಣ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸುಗುಣ ಸರಣಿ ಶ್ರೇಷ್ಠ: ಎಫ್ಎಂಸಿ ಆಟಗಾರ ಸುಗುಣ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು. ಎಫ್ಎಂಸಿ ಆಟಗಾರ ಯಶ್ವಂತ್ ಉತ್ತಮ ಗೋಲ್ ಕೀಪರ್, ಮೂರ್ನಾಡು ಆಟಗಾರ ಸುಬ್ರಮಣಿ ಪಂದ್ಯ ಶ್ರೇಷ್ಠ, ವಿರಾಜಪೇಟೆ ಕಾವೇರಿ ಕಾಲೇಜು ಆಟಗಾರ ಪೊನ್ನಣ್ಣ ಶಿಸ್ತುಬದ್ಧ ಆಟಗಾರ ಸ್ಥಾನ ಪಡೆದುಕೊಂಡರು.
ಆಯ್ಕೆಯಲ್ಲಿ ಭ್ರಷ್ಠಾಚಾರವಿಲ್ಲ: ರಾಜ್ಯ ಮಟ್ಟಕ್ಕೆ ಕ್ರೀಡಾಪುಟಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಭ್ರಷ್ಟಚಾರ ಇದೆ ಎಂಬ ಆರೋಪ ಸರಿಯಲ್ಲ ಎಂದು ಅಂತಾರಾಷ್ಟ್ರೀಯ ರೆಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅಭಿಪ್ರಾಯ ಪಟ್ಟರು. ಸ್ಥಳೀಯ ಮಟ್ಟದಲ್ಲಿ ಉತ್ತಮ ಆಟ ಪ್ರದರ್ಶನದ ಮೂಲಕ ಗಮನ ಸೆಳೆಯುವ ಪ್ರಯತ್ನ ಮುಂದುವರಿಸಬೇಕಿದೆ. ವಿದ್ಯಾರ್ಥೀ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಕೈಚೆಲ್ಲಬಾರದು. ಇದರಿಂದ ಅವಕಾಶ ತೆರೆದುಕೊಳ್ಳುತ್ತದೆ. ದೃಡತೆ ಮುಖ್ಯವಾಗಿದೆ. ಕಾಲೇಜು ಮತ್ತು ರಾಷ್ಟ್ರಮಟ್ಟದ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಕಾಲೇಜು ಹಂತದ ಪ್ರದರ್ಶನ ಮುಖ್ಯವಾಗಲಿದೆ ಎಂದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಫಾದರ್ ಮದುಲೈ ಮುತ್ತು ಮಾತನಾಡಿ, ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಕ್ರೀಡೆ ಸಹಕಾರಿಯಾಗುತ್ತಿದೆ. ಕ್ರೀಡೆಯಿಂದ ಒಗ್ಗಟ್ಟು ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ವಿರಾಜಪೇಟೆ ಕಾವೇರಿ ಕಾಲೇಜು (ಎ) ಮತ್ತು (ಬಿ) ತಂಡ, ಸೆಂಟ್ ಆನ್ಸ್, ಮಡಿಕೇರಿ ಎಫ್ಎಂಸಿ, ಕಾವೇರಿ ಪಾಲಿಟೆಕ್ನಿಕ್, ಗೋಣಿಕೊಪ್ಪ ಕಾವೇರಿ ಕಾಲೇಜು, ಮೂರ್ನಾಡು ಪ್ರಥಮ ದರ್ಜೆ, ಸೆಂಟ್ ಜೋಸೆಫ್, ರೇವಾ, ಸಪೈಂಟ್, ಗೋಣಿಕೊಪ್ಪ ಲಯನ್ಸ್ ಸೇರಿದಂತೆ 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ಮೂಕಚಂಡ ಬೊಳ್ಳಮ್ಮ ಪಂದ್ಯದ ವೀಕ್ಷಕ ವಿವರಣೆ ನೀಡಿದರು. ದೃಶ್ಯ ಸ್ವಾಗತಿಸಿದರು. ದೇಚಮ್ಮ ವಂದಿಸಿದರು. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಬಿಬಿಎ ವಿಭಾಗದ ಮುಖ್ಯಸ್ಥೆ ಬಿ. ಡಿ. ಹೇಮಾ, ದೈಹಿಕ ಶಿಕ್ಷಣ ಶಿಕ್ಷಕ ರಾಜುರೈ, ವಿದ್ಯಾರ್ಥಿ ನಾಯಕ ತನೀಶ್ ಇದ್ದರು.
ಫೋಟೋ 22 ಎಂಡಿಕೆ 03 ; ಚಾಂಪಿಯನ್ ಫೀ. ಮಾ. ಕೆ. ಎಂ. ಕಾರ್ಯಪ್ಪ ಕಾಲೇಜು ತಂಡ
04 ; ರನ್ನರ್ ಅಪ್ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ರನ್ನರ್ ಅಪ್
05 ; ಅಂತಾರಾಷ್ಟ್ರೀಯ ರೆಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿದರು.