ಪೊನ್ನಂಪೇಟೆ: ಜೂ.3ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲ ಎಸ್.ಪಿ. ದಿನೇಶ್ ಪರವಾಗಿ ಮತಯಾಚನೆ ನಡೆಯಿತು.
ವಿರಾಜಪೇಟೆಯ ಸಿ.ಜೆ.ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಪದವೀಧರ ಮತದಾರರನ್ನು ಭೇಟಿ ಮಾಡಲಾಯಿತು. ಶಿವಮೊಗ್ಗದ ವಕೀಲ ಎಸ್.ಪಿ.ದಿನೇಶ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವಿರಾಜಪೇಟೆಯ ಕಾವೇರಿ ಕಾಲೇಜು, ಸಂತ ಅನ್ನಮ್ಮ ವಿದ್ಯಾಸಂಸ್ಥೆ, ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಕಾಲೇಜು ಸೇರಿದಂತೆ ವಿವಿಧಡೆಗಳಿಗೆ ತೆರಳಿ ಮತಯಾಚಿಸಿತು.
ಸಿ.ಜೆ.ಅಶೋಕ್ ಕುಮಾರ್ ಮಾತನಾಡಿ, ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ ಅವರು ಕೇವಲ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪದವೀಧರರ ಸಮಸ್ಯೆಗಳ ಕುರಿತು ಆಳವಾಗಿ ಅಧ್ಯಯನ ನಡೆಸಿರುವ ಹಿರಿಯ ನ್ಯಾಯವಾದಿಯಾದ ದಿನೇಶ್ ಬದ್ಧತೆಯುಳ್ಳ ಮತ್ತು ದೂರ ದೃಷ್ಟಿಯುಳ್ಳ ರಾಜಕಾರಣಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪದವೀಧರರು ಅವರನ್ನು ಕೈ ಹಿಡಿಯುವ ವಿಶ್ವಾಸವಿದ್ದು, ಮೂರನೇ ಬಾರಿಯ ಚುನಾವಣೆಯಲ್ಲಿ ಅವರು ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಲೋಕೇಶ್ ಶಿವಮೊಗ್ಗ, ವಕೀಲರಾದ ಪ್ರವೀಣ್ ಕುಮಾರ್, ಪ್ರಮುಖರಾದ ಲೋಕೇಶ್ ಮೈಸೂರು, ಶಿವಕುಮಾರ್, ಸದಾಶಿವಪ್ಪ ಇದ್ದರು.
ಫೋಟೋ 26 ಎಂಡಿಕೆ 07 ; ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರ ಪರವಾಗಿ ಮತಯಾಚಿಸುತ್ತಿರುವುದು.