- ಸಂಗೀತ ನೃತ್ಯ ಸಾಪ್ತಾಹ ಸೇವೆ ಸಲ್ಲಿಕೆ
ಪ್ರತಿನಿಧಿ ವರದಿ ಮೇಲುಕೋಟೆ
ಶ್ರೀ ಚೆಲುವನಾರಾಯಣಸ್ವಾಮಿಗೆ ಅಭಿಷೇಕ ಹಾಗೂ ಮಂಟಪವಾಹನೋತ್ಸವ ನೆರವೇರುವುದರೊಂದಿಗೆ ಪಲ್ಲವೋತ್ಸವ ಹಾಗೂ ಕಲಾರಾಧನೆಯ ಸೇವೆಯ ಅಂಗವಾಗಿ ವಿದ್ವಾನ್ ರಘುಸಿಂಹ ಕೊಳಲುವಾದನದೊಂದಿಗೆ ಸಂಗೀತ-ನೃತ್ಯಸಾಪ್ತಾಹ ಮಂಗಳವಾರ ಆರಂಭವಾಯಿತು.
ಏಳು ದಿನಗಳಕಾಲ ನಡೆಯುವ ಪಲ್ಲವೋತ್ಸವ-ಸಂಗೀತ ಸಾಪ್ತಾಹದಲ್ಲಿ ಪ್ರತಿದಿನ ಚೆಲುವನಾರಾಯಣಸ್ವಾಮಿಗೆ ಅಭಿಷೇಕ ಮದ್ಯಾಹ್ನ ಸಂಗೀತಸೇವೆ ಹಾಗೂ ಸಂಜೆ ವಾಹನೋತ್ಸವಗಳು ನಡೆಯಲಿದೆ. ಮೇ 29ರಂದು ಸಂಗೀತ-ನೃತ್ಯ ಸಾಪ್ತಾಹದ ಅಂಗವಾಗಿ ವಿದುಶಿ ಸ್ನೇಹಾನಾರಾಯಣ್ ತಂಡದಿಂದ ಭರತನಾಟ್ಯ ಶೇಷವಾಹನೋತ್ಸವ 30ರಂದು ವಿದ್ವಾನ್ ಶಿವರಾಮ್ ತಂಡದಿಂದ ಎಲೆಕ್ಟ್ರಿಕ್ ಮ್ಯಾಂಡಲಿನ್, ಚಂದ್ರಮಂಡಲವಾಹನೋತ್ಸವ 31ರಂದು ವಿದ್ಯಾನ್ ಅಭಿಷೇಕ್ ಸಿಂಹ ಮತ್ತು ವಿದುಶಿ ಸುರಭಿಪ್ರಸಾದ್ರಿಂದ ಕರ್ನಾಟಕ ಶಾಸ್ರ್ತೀಯ ಗಾಯನ, ಅಶ್ವವಾಹನೋತ್ಸವ ಜೂ.1 ರಂದುವಿದ್ವಾನ್ ವಿಷ್ಣುವೆಂಕಟೇಶ್ ರಿಂದ ಮ್ಯಾಂಡಲಿನ್, ಆನೇವಾಹನ ಜೂ.2ರಂದು ವಿದುಶಿ ರಮ್ಯಾಕಡಾಂಬಿ ಭರತನಾಟ್ಯ ಹನುಮಂತವಾಹನೋತ್ಸವ ಸಮಾರೋಪದ ದಿನವಾದ ಜೂ.3ರಂದು ವಿದುಶಿರಜನೀಕಲ್ಲೂರು ಭರತನಾಟ್ಯ ಗರುಡವಾಹನೋತ್ಸವ ನಡೆಯಲಿದೆ.
ಈ ಏಳು ದಿನಗಳ ಕಾಲ ನಡೆಯುವ ಪಲ್ಲವೋತ್ಸವದಲ್ಲಿ ಭಕ್ತರೂ ಸಹ ಅಭಿಷೇಕ ಸೇವೆ ಹಾಗೂ ವಾಹನೋತ್ಸವ ಸೇವೆ ಮಾಡುವ ಕೊನೆಯದಿನ ಗರುಡೋತ್ಸವ ಸೇವೆ ಮಾಡಲೂ ಸಹ ಅವಕಾಶವಿದ್ದು, ಭಕ್ತರು ದೇವಾಲಯದ ಕಚೇರಿಯನ್ನು ಸಂಪರ್ಕಿಸಿ ಮಹೋತ್ಸವದಲ್ಲಿ ಸೇವೆಮಾಡಿಸಬಹುದಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್.ಮಹೇಶ್ ಹಾಗೂ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮಾಹಿತಿ ನೀಡಿದ್ದಾರೆ.
ಚೆಲುವನಿಗೆ ಕಲಾರಾಧನೆಯ ಸೇವೆ: ಮೇಲುಕೋಟೆ ದೇವಾಲಯದಲ್ಲಿ ನಡೆಯುತ್ತಿರುವ ಸಂಗೀತಸಾಪ್ತಾಹದಲ್ಲಿ ಪ್ರಥಮ ದಿನವಾದ ಮಂಗಳವಾರ ವಿದ್ವಾನ್ ರಘುಸಿಂಹ ಕೊಳಲುವಾದನದ ಸಂಗೀತಸುಧೆಹರಿಸಿ ಚೆಲುವನಾರಾಯಣಸ್ವಾಮಿಗೆ ಶಾಸ್ತ್ರೀಯ ಸಂಗೀತದ ಕಲಾರಾಧನೆಯ ಸೇವೆ ಮಾಡಿದರು.
ಕೇಳುಗರಿಲ್ಲದಿದ್ದರೂ ತನ್ಮಯತೆಯಿಂದ ಎರಡು ಗಂಟೆಗೂ ಹೆಚ್ಚುಕಾಲ ಕೀರ್ತನೆಗಳನ್ನು ನುಡಿಸಿದ ಅವರು ನವರಾಗಮಾಲಿಕಾ, ಶ್ರೀಮನ್ನಾರಾಯಣ, ಸರಸ್ವತೀನಮೋಸ್ತುತೇ, ಎಂತಮುದ್ದೋ, ಸಾರಸಮುಖಿ ಇತರ ಅಮೋಘ ಕೀರ್ತನೆಗಳ ಇಂಪು ಸಾಕ್ಷಾತ್ ವೈಂಕುಂಠದ ದರ್ಶನ ನೀಡಿ ಸಂಗೀತಲೋಕಕ್ಕೆ ಕೊಂಡೊಯ್ದಿತ್ತು.
ಅಭಯ್ ಸಂಪಗೆತ್ತಾಯ, ವಯೋಲಿನ್ ವಿದ್ಯಾಶಂಕರ್ ಮೃದಂಗ ಪಕ್ಕವಾದ್ಯ ನುಡಿಸುವ ಮೂಲಕ ಸಂಗೀತ ಕಚೇರಿಗೆ ಕಳೆ ನೀಡಿದರು ಮೇ 28 ರಿಂದ ಜೂ.3ರವರೆಗೆ ಏಳುದಿನಗಳ ಕಾಲ ಪಲ್ಲವೋತ್ಸವದಲ್ಲಿ ಮೇಲುಕೋಟೆಯ ಶ್ರೀರಾಮಾನುಜ ಸಹಸ್ರಮಾನೋತ್ಸವ ಸೇವಾ (ರಿ) ಸಂಗೀತ-ನೃತ್ಯಸಾಪ್ತಾಹ ನಡೆಸುತ್ತದೆ ಎಂದು ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್ ತಿಳಿಸಿದ್ದಾರೆ.
ಚಿತ್ರ :28ಎಂ.ಎಲ್.ಕೆ 1 ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ಪಲ್ಲವೋತ್ಸವ ಆರಂಭದ ದಿನವಾದ ಮಂಗಳವಾರ ಭವ್ಯ ಅಲಂಕಾರ ಮಾಡಲಾಗಿತ್ತು.
2: ಮೇಲುಕೋಟೆ ದೇವಾಲಯದಲ್ಲಿ ನಡೆಯುತ್ತಿರುವ ಸಂಗೀತ-ನೃತ್ಯ ಸಾಪ್ತಾಹದಲ್ಲಿ ಮಂಗಳವಾರ ವಿದ್ವಾನ್ ರಘುಸಿಂಹ ತಂಡ ಕೊಳಲುವಾದನದ ಸಂಗೀತಸುಧೆ ಹರಿಸಿ ಚೆಲುವನಿಗೆ ಕಲಾರಾಧನೆಯ ಸೇವೆ ಮಾಡಿದರು.