ಪ್ರತಿನಿಧಿ ವರದಿ ಅರೇಹಳ್ಳಿ
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಅರೇಹಳ್ಳಿ ಹೋಬಳಿಯ ನೂರಾರು ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಷಕಾಂಗ್ರೆಸ್ ಮುಖಂಡ ತುಳಸಿದಾಸ್ ಮಾತನಾಡಿ, 25 ವರ್ಷಗಳಿಂದ ಒಂದೇ ಕುಟುಂಬದ ವಶದಲ್ಲಿದ್ದ ಲೋಕಸಭಾ ಸದಸ್ಯರ ಸ್ಥಾನವನ್ನು ಮರಳಿ ಪಡೆಯುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಯಶಸ್ವಿಯಾಗಿದ್ದಾರೆ. ಅರೇಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅತಿ ಹೆಚ್ಚು ಮತ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಅನುಘಟ್ಟ ಮಂಜುನಾಥ್ ಮಾತನಾಡಿ, ಶ್ರೇಯಸ್ ಪಟೇಲ್ ಅವರ ಗೆಲುವು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಗೆಲುವಾಗಿದೆ. ಈ ಗೆಲುವಿನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಹೂಸ ಭರವಸೆ ಮೂಡಿಸಿದ್ದು, ಜಿಲ್ಲೆಯ ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಿ ಭವಿಷ್ಯದ ಯುವ ನಾಯಕ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೂಸ ಚೈತನ್ಯ ಮೂಡಿಸಿದೆ ಎಂದರು.
ಸಿರಾಜ್ ಅಹಮದ್, ಮಾಜಿ ತಾ.ಪಂ.ಅಧ್ಯಕ್ಷ ಅಣ್ಣಪ್ಪ, ಎಸ್.ವಿರೂಪಾಕ್ಷ, ಲಿಂಗರಾಜು ನಾರ್ವೆ, ಮಲ್ಲಿಕಾರ್ಜುನ್, ಸುಲಗಳಲೆ ಮುಸ್ತಾಫ, ವೀರಭದ್ರ ಶೆಟ್ಟಿ, ಟಿ.ಪಿ.ಮಲ್ಲೇಶ್, ಸೋಮಶೇಖರ್, ಕಾರ್ತಿಕ್, ಯೋಗೇಶ್, ಮಹೇಂದ್ರ, ಭದ್ರೇಶ್, ಇತರರು ಇದ್ದರು.
Leave a comment