ಚಿಕ್ಕಮಗಳೂರು: ಜಮ್ಮು ಕಾಶ್ಮೀರದ ತ್ರಿತ್ವಾಲ್ನಲ್ಲಿರುವ ಶಾರಾದೆ ಮಂದಿರದಲ್ಲಿ ಜೂ.24 ಹಾಗೂ 25ರಂದು ಶಾರದಾದೇವಿಗೆ ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಶಾರದ ಮಠವು ಪ್ರಕಟಣೆಯಲ್ಲಿ ತಿಳಿಸಿದೆ.
ಶೃಂಗೇರಿ ಶಾರದಾಪೀಠ, ಕಾಶ್ಮೀರದ ವಿವಿಧ ಸಂಘಟನೆಗಳು, ಕಾಶ್ಮೀರ ಶಾರದೆ ದೇವಾಲಯ ಸಮಿತಿ ಸೇರಿ ಈ ಐತಿಹಾಸಿಕ ಕಾರ್ಯಕ್ರಮ ನಡೆಸುತ್ತಿದೆ. ಅಂದು ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
Leave a comment