ಪ್ರತಿನಿಧಿ ವರದಿ ಹಾಸನ
ನಗರದ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡದ ಹಿಂಭಾಗವಿರುವ ಖಾಲಿ ಜಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಸಿರುಭೂಮಿ ಪ್ರತಿಷ್ಠಾನ ನಗರ ಕೇಂದ್ರ ಗ್ರಂಥಾಲಯ, ಅರಣ್ಯ ಇಲಾಖೆ, ಮುಂಜಾನೆ ಮಿತ್ರರರು, ಎವಿಕೆ ಕಾಲೇಜು ಮತ್ತು ಎಂ.ಕೃಷ್ಣ ಕಾನೂನು ಕಾಲೇಜು ಎನ್.ಎಸ್.ಎಸ್.ಘಟಕ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರದಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಪುಟ್ಟಡವಿ ನಿರ್ಮಾಣವನ್ನು ಯಶಸ್ವಿಯಾಗಿ ನೆರವೇರಿತು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ, ನಗರದ ಕೇಂದ್ರ ಗ್ರಂಥಾಲಯದ ಆವರದಲ್ಲಿ ಸುಮಾರು 200 ಗಿಡವನ್ನು ಹಾಕಿ ನಗರದ ಕಾಡು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನೂರು ವರ್ಷದಲ್ಲಿ ಬೆಳೆಯುವ ಗಿಡ 20 ವರ್ಷದಲ್ಲಿ ಬೆಳೆಯುವ ಪ್ರಯೋಗವನ್ನು ಹಾಸನದಲ್ಲಿ ಮಾಡಲಾಗುತ್ತಿದ್ದು, ಇನ್ನು ಪೋಷಣೆ ಮಾಡಲು ಕೇಂದ್ರ ಪ್ರತಿವಾರ ಎವಿಕೆ ಕಾಲೇಜಿನ ಮತ್ತು ಎಂ.ಕೃಷ್ಣ ಕಾನೂನು ಕಾಲೇಜಿನ, ಎನ್.ಎಸ್.ಎಸ್.ಘಟಕಗಳು ಸರದಿಯಲ್ಲಿ ಮಕ್ಕಳು ಬಂದು ಗಿಡವನ್ನು ಪೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ಎಂ.ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ಎವಿಕೆ ಕಾಲೇಜು ಪ್ರಾಂಶುಪಾಲ ಸೀ.ಚ.ಯತೀಶ್ವರ್, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ.ವೆಂಕಟೇಶ್ ಮೂರ್ತಿ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ಡಾ.ಸಾವಿತ್ರಿ, ಡಾ.ಸೌಮ್ಯ, ಡಾ.ತೇಜಸ್ವಿ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಅರ್ಜುನ್ ಶೆಟ್ಟಿ, ಬಿಜಿವಿಎಸ್ ಅಧ್ಯಕ್ಷ ಗುರುರಾಜು, ಕಲಾವಿದ ಯಾಕೂಬ್, ಡೆಂಟಲ್ ಅಸೋಸಿಯೇಷನ್ ನಿಂದ ನಿಖಿತಾ ಇತರರು ಪಾಲ್ಗೊಂಡಿದ್ದರು.