ನಾಪೋಕ್ಲು: ಪಟ್ಟಣ ಸೇರಿದಂತೆ ಚೆರಿಯಪರಂಬು ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು , ಮಕ್ಕಳು, ಮಹಿಳೆಯರು, ವಯೋವೃದ್ಧರು ಓಡಾಡುವುದೇ ಕಷ್ಟವಾಗಿದೆ, ಮಕ್ಕಳನ್ನಂತೂ ಒಬ್ಬೊಬ್ಬರೇ ಕಳುಹಿಸುವುದು ಭಯ ಮೂಡಿಸುತ್ತಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮಕ್ಕೆ ಮುಂದಾಗಬೇಕು ಎಂದು ಚೆರಿಯಪರಂಬು ಮುಹಿಯುದ್ದೀನ್ ಜುಮಾ ಮಸೀದಿ ಉಪಾಧ್ಯಕ್ಷ ಪರವಂಡ ಸಿರಾಜ್ ಒತ್ತಾಯಿಸಿದ್ದಾರೆ.
ಕೋಳಿ, ಕುರಿ, ಸಾಕು ಪ್ರಾಣಿಗಳ ಮೇಲೂ ಶ್ವಾನಗಳು ದಾಳಿ ನಡೆಸುತ್ತಿವೆ. ಚಿಕ್ಕ ಮಕ್ಕಳ ಕೈಯಲ್ಲಿ ತಿಂಡಿ ತಿನಸು ಇದ್ದರೆ ದಾಳಿ ಮಾಡಿ ತಿನ್ನುತ್ತವೆ. ಹಿಂಡು ಹಿಂಡಾಗಿ ಸುತ್ತಾಡುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ಸವಾರರನ್ನು ಅಟ್ಟಿಸಿಕೊಂಡು ಹೋಗುವುದರಿಂದ ಅಪಾಯ ಹೆಚ್ಚಿದೆ. ತೊಂದರೆ ತಪ್ಪಿಸಲು ಮುಂದಾಗಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಫೋಟೋ 9 ಎಂಡಿಕೆ 02 ; ಪರವಂಡ ಸಿರಾಜ್