- ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆ ಅಧ್ಯಕ್ಷೆ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅಭಿಪ್ರಾಯ
ಪ್ರತಿನಿಧಿ ವರದಿ ಗೋಣಿಕೊಪ್ಪ
ಇಂದಿನ ಕಾಲಘಟಕ್ಕೆ ಶಿಕ್ಷಣ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಹಂಬಲ ಪಾಲಕರಲ್ಲಿದೆ. ಅದ್ದರಿಂದ ಪಾಲಕರು ಮನೆಯೇ ಮೊದಲ ಪಾಠ ಶಾಲೆ ಎಂಬ ಬಗ್ಗೆ ಅರಿತುಕೊಂಡು ಮುಂದುವರಿಯಬೇಕಿದೆ ಎಂದು ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆ ಅಧ್ಯಕ್ಷೆ ಡಾ.ಅಪ್ಪನೆರವಂಡ ಶಾಂತಿ ಅಚ್ಚಪ್ಪ ಪ್ರತಿಪಾದಿಸಿದರು.
ಪ್ರತಿನಿಧಿ ದಿನಪತ್ರಿಕೆ ಹೊರ ತಂದಿರುವ ವಿದ್ಯಾಸಿರಿ ವಿಶೇಷ ಸಂಚಿಕೆಯನ್ನು ಶಾಲೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಮನೆಯಲ್ಲಿ ಉತ್ತಮ ಶಿಕ್ಷಣ ನೀಡುವುದರಿಂದ ಪ್ರಾರಂಭಿಕ ಹಂತದಲ್ಲಿ ಮಕ್ಕಳು ಗುಣಮಟ್ಟ, ಸಂಸ್ಕಾರಯುತವಾಗಿ ಬೆಳೆಯಲು ಪ್ರೇರಣೇಯಾಗಲಿದೆ. ಮನೆ ಮೊದಲ ಪಾಠ ಶಾಲೆ ಎಂಬ ಅರಿವು ಮುಖ್ಯ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲೆ ಜೆ.ಎಂ.ಪುಷ್ಪ ಮಾತನಾಡಿ, ತರಗತಿಗಳಲ್ಲಿ ಪುಸ್ತಕ ಓದುವುದು ಮಾತ್ರ ಶಿಕ್ಷಣ ಎಂಬ ನಿರ್ಧಾರದಿಂದ ಪಾಲಕರು ಹೊರಬರಬೇಕಿದೆ. ನಾವು ಕೂಡ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗೆ ಒತ್ತು ನೀಡುತ್ತಿದ್ದೇವೆ. ಮಕ್ಕಳ ಕೌಶಲ, ಪ್ರತಿಭೆ ಅನಾವರಣಕ್ಕೆ ಶಿಕ್ಷಣ ಸಂಸ್ಥೆ ವೇದಿಕೆಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಜವಾಬ್ದಾರಿ ನಿಭಾಯಿಸುವ ಹಂತಕ್ಕೆ ಬೆಳೆಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಶಿಕ್ಷಕಿ ಎ.ಟಿ.ಯಶ್ಮ ತಿಮ್ಮಯ್ಯ ಮಾತನಾಡಿ, ನವೋದ್ಯಮಿಯಾಗುವುಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಅವಶ್ಯವಿದೆ. ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಿಕ್ಷಕರಿಂದ ನಡೆಯುತ್ತಿದೆ ಎಂದು ಹೇಳಿದರು.
ಶಿಕ್ಷಕಿ ಎನ್.ಎಂ.ಸರಿತಾ ಮಾತನಾಡಿ, ಅವಕಾಶ ತೆರೆದುಕೊಳ್ಳಲು ಶಿಕ್ಷಣ ಅವಶ್ಯ. ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ಬೆಳೆಯಲು ನಾವು ಚಿಂತನೆ ನಡೆಸಿದ್ದೇವೆ. ಇದರ ನುಷ್ಠಾನ ನಡೆಯುತ್ತಿದೆ ಎಂದರು.
ವಿದ್ಯಾಸಿರಿ ಮುದ್ರಣ ಗುಣಮಟ್ಟ, ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಯಿತು. ರಾಜ್ಯ ಶಿಕ್ಷಣ ಸಂಸ್ಥೆಗಳ ಪರಿಚಯದಿಂದ ಸಮಾಜಕ್ಕೆ ಹೆಚ್ಚು ಪ್ರಯೋಜನ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಶಿಕ್ಷಕರಾದ ಎನ್.ಬಿ.ಮೋನಿಶ್, ಟಿ.ಎಂ.ಶಿಲ್ಪ, ಕೆ.ಆರ್.ಶರಣ್ಯ, ಕೆ.ಎಂ.ಚಂದನಾ, ಎಂ.ಎ.ಅನುಷಾ ಇದ್ದರು.
ಫೋಟೋ 12 ಜಿಕೆಪಿ 01 ; ಪ್ರತಿನಿಧಿ ದಿನಪತ್ರಿಕೆ ಹೊರ ತಂದಿರುವ ವಿದ್ಯಾಸಿರಿ ವಿಶೇಷ ಸಂಚಿಕೆಯನ್ನು ನ್ಯಾಷನಲ್ ಅಕಾಡೆಮಿ ಶಾಲೆ ಅಧ್ಯಕ್ಷೆ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಬಿಡುಗಡೆಗೊಳಿಸಿದರು