ವಿರಾಜಪೇಟೆ: ಪ್ರತಿನಿಧಿ ಪತ್ರಿಕೆ ಹೊರತಂದಿರುವ ‘ವಿದ್ಯಾಸಿರಿ’ಯನ್ನು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಮುಖ್ಯಸ್ಥ ಮಾದಂಡ ತಿಮ್ಮಯ್ಯ ಮಾತನಾಡಿ, ಪತ್ರಿಕೆ ಓದುವ ಅಭ್ಯಾಸದಿಂದ ದೂರ ಹೋಗದಂತೆ ತಡೆಯುವ ಕಾರ್ಯ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಓದುವ ಹವ್ಯಾಸಕ್ಕಾಗಿ ಗ್ರಂಥಾಲಯದಲ್ಲಿ ಹೆಚ್ಚು ಕಾಲ ಕಳೆಯುವಂತೆ ಯೋಜನೆ ರೂಪಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಓದಲು ಸಾಕಷ್ಟು ಪತ್ರಿಕೆ ದೊರೆಯುವಂತೆ ಮಾಡಲಾಗಿದೆ. ನಮ್ಮ ಪ್ರೋತ್ಸಾಹದಿಂದ ಮಾತ್ರ ಓದುವ ಅಭ್ಯಾಸ ಮೈಗೂಡಿಸಿಕೊಳ್ಳುವಂತೆ ಮಾಡಬಹುದು ಎಂದರು.
ಪ್ರತಿನಿಧಿ ಪತ್ರಿಕೆ ಹೊರತಂದಿರುವ ವಿದ್ಯಾಸಿರಿ ಸಂಚಿಕೆಯಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಾಕಷ್ಟು ಶಾಲೆ, ಕಾಲೇಜುಗಳ ಪರಿಚಯವಾಗಿದೆ. ನಮ್ಮ ಪರಿವರ್ತನೆಗೆ ದಾರಿಯಾಗಿದೆ. ಪುಸ್ತಕ ರೂಪದಲ್ಲಿ ನೀಡುವುದರಿಂದ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.
ಆಡಳಿತ ಅಧಿಕಾರಿ ಸುಷ್ಮಾ ತಿಮ್ಮಯ್ಯ, ಪ್ರಾಂಶುಪಾಲೆ ವಿಮಲಾ, ವಿದ್ಯಾರ್ಥಿಗಳಾದ ದಿಯ, ಉಮರ್ ಇದ್ದರು.
ಫೋಟೋ 13 ಎಂಡಿಕೆ 03 ; ವಿರಾಜಪೇಟೆ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪ್ರತಿನಿಧಿ ವಿದ್ಯಾಸಿರಿಯನ್ನು ಬಿಡುಗಡೆಗೊಳಿಸಲಾಯಿತು.