ಪ್ರತಿನಿಧಿ ವರದಿ ವಿರಾಜಪೇಟೆ
ಪ್ರತಿನಿಧಿ ದಿನಪತ್ರಿಕೆ ಹೊರ ತಂದಿರುವ ವಿದ್ಯಾಸಿರಿ ವಿಶೇಷ ಸಂಚಿಕೆಯನ್ನು ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಉಪ ಪ್ರಾಂಶುಪಾಲ ಡಾ.ಜಿತೇಶ್ ಅವರು ಶಾಲೆಯಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ, ರಾಜ್ಯಮಟ್ಟದ ಶಿಕ್ಷಣ ಸಂಸ್ಥೆಗಳ ಪರಿಚಯ ನಮ್ಮ ಜ್ಞಾನಾಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪೂರ್ವ ಪ್ರಾಥಮಿಕ ವಿಭಾಗದಿಂದ ಉನ್ನತ ಶಿಕ್ಷಣದವರೆಗೂ ಮಾಹಿತಿ ದೊರೆಯುತ್ತಿದೆ. ಇಂತಹ ಪ್ರಯತ್ನ ಒಳ್ಳೆದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಿಡಿಯಾಟ್ರಿಕ್ ವಿಭಾಗದ ಮುಖ್ಯಸ್ಥೆ ಡಾ.ಬಿ.ಎಂ.ಶಾಂತಲಾ ಮಾತನಾಡಿ, ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ಕಾಲೇಜು, ಕೋರ್ಸ್ ಮತ್ತು ನಿಗದಿತ ಪ್ರದೇಶ ಮಾಹಿತಿ ದೊರೆಯುವಂತಾಗಿದೆ ಎಂದರು.
ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಯಾವ ಕೋರ್ಸ್ ಗೆ ಸೇರಬೇಕು ಎಂಬ ಗೊಂದಲ ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಮನಸು ತಿಳಿಗೊಳಿಸಿಕೊಂಡು ಸಾಕಷ್ಟು ವಿದ್ಯಾಸಂಸ್ಥೆಗಳ ಮಾಹಿತಿ, ದೊರೆಯುವ ಕೋರ್ಸ್ ಗಳ ಮಾಹಿತಿ ಅರಿತುಕೊಂಡು ಮುಂದುವರಿಯಲು ಸಹಕಾರಿಯಾಗಿದೆ. ಸ್ಥಳೀಯವಾಗಿರುವ ಪಾಲಕರಿಗೆ ನಗರದ ಪರಿಚಯ ಇರುವುದಿಲ್ಲ. ಹೀಗಿದ್ದಾಗ ಗೊಂದಲ ಇಲ್ಲದೆ ಶಿಕ್ಷಣ ಸಂಸ್ಥೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ವೃತ್ತಿ ಪರ ಕೋರ್ಸ್ ಕೂಡ ಜನರಿಗೆ ಬೇಕಿದೆ. ಭವಿಷ್ಯದಲ್ಲಿ ಯಾವ ಶಿಕ್ಷಣ ಅವಶ್ಯ ಎಂಬುವುದನ್ನು ಅರಿತುಕೊಂಡು ಪೂರಕ ಶಿಕ್ಷಣಕ್ಕೆ ಮುಂದಾಗಬೇಕಿದೆ. ಪುಸ್ತಕ ರೂಪದಲ್ಲಿ ದೊರೆತಿರುವುದರಿಂದ ಯಾವ ಕಾಲಘಟ್ಟಕ್ಕೂ ಸಂಗ್ರಹಿಸಿಕೊಳ್ಳಲು ಸಹಕಾರಿಯಾಗಿದೆ. ಆನ್ ಲೈನ್ ಮೂಲಕ ಅರಿತುಕೊಂಡ ಜ್ಞಾನ ಹೆಚ್ಚು ಕಾಲ ಉಳಿಯವುದು ಕಷ್ಟ. ತಾಂತ್ರಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪುಸ್ತಕ ರೂಪ ಒಳ್ಳೆಯದು ಎಂದರು.
ವಿದ್ಯಾರ್ಥಿಗಳು ಮಾತ್ರವಲ್ಲದೆ ಪಾಲಕರಿಗೂ ಹೆಚ್ಚು ಪ್ರಯೋಜನಕಾರಿ. ಉತ್ತಮ ಚಿಂತನೆಯಿಂದ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯುವಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪೆರಿಯಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಅಮಿತ್ ವಾಲ್ವೇಕರ್, ಓರಲ್ ಮೆಡಿಸಿನ್ಹಾಗೂ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಕವಿತಾ, ಆರ್ಥೋಡಾಂಟಿಕ್ಸ್ ಸೀನಿಯರ್ ಲೆಕ್ಚರ್ ಡಾ.ಸುಜಿತ್ ಮ್ಯಾಥ್ಯೂ, ಯೂನಿವರ್ಸಿಟಿ ಇನ್ಚಾರ್ಜ್ ಕೆ.ಎಂ.ಭೀಮಯ್ಯ, ಸ್ಟುಡೆಂಟ್ಸ್ ಎಫರ್ಸ್ ಎನ್.ಯು.ಕಲ್ಪ ಇದ್ದರು.
ಫೋಟೋ 13 ಎಂಡಿಕೆ 01 ; ಪ್ರತಿನಿಧಿ ದಿನಪತ್ರಿಕೆ ಹೊರ ತಂದಿರುವ ವಿದ್ಯಾಸಿರಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.