ಪ್ರತಿನಿಧಿ ವರದಿ ಸೋಮವಾರಪೇಟೆ
ತಾಲೂಕಿನ ಬಳಗುಂದ ತೋಟಗಾರಿಕೆ ಕ್ಷೇತ್ರ ಮತ್ತು ಕೂಡಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ತೆಂಗು ಮತ್ತು ಅಡಿಕೆ ಸಸಿಗಳು ಇಲಾಖಾ ದರದಲ್ಲಿ ರೈತರಿಗೆ ವಿತರಿಸಲು ಲಭ್ಯವಿರುವುದಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ.ಮಂಜುನಾಥ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಗು ಗಿಡವೊಂದಕ್ಕೆ ೭೫ ರೂ. ಹಾಗು ಅಡಿಕೆ ಗಿಡಕ್ಕೆ ೨೫ ರೂ. ನಿಗಧಿಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ಸಸಿಗಳನ್ನು ನಾಟಿ ಮಾಡಲು ನಿಯಮಾನುಸಾರ ಪ್ರೋತ್ಸಾಹ ಧನವನ್ನು ನರೇಗಾ ಮುಖಾಂತರ ನೀಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳಗುಂದ ತೋಟಗಾರಿಕೆ ಕ್ಷೇತ್ರ ೯೮೪೪೩೬೦೭೬೪, ಕೂಡಿಗೆ ತೋಟಗಾರಿಕೆ ಕ್ಷೇತ್ರ ೮೭೬೨೯೩೭೭೦೪ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.
ಚಿತ್ರ: ಸೋಮವಾರಪೇಟೆ ಸಮೀಪದ ಬಳಗುಂದ ತೋಟಗಾರಿಕೆ ಕ್ಷೇತ್ರದಲ್ಲಿ ರೈತರಿಗೆ ವಿತರಿಸಲು ಸಿದ್ಧವಾಗಿರುವ ಗುಣಮಟ್ಟದ ತೆಂಗಿನ ಸಸಿಗಳು.