ಪ್ರಾಂಶುಪಾಲ ತನ್ವೀರ್ ಅಭಿಪ್ರಾಯ
ಪ್ರತಿನಿಧಿ ವರದಿ ನಾಪೋಕ್ಲು
ಪ್ರತಿನಿಧಿ ದಿನಪತ್ರಿಕೆ ಹೊರ ತಂದಿರುವ ವಿದ್ಯಾಸಿರಿ ವಿಶೇಷ ಸಂಚಿಕೆಯನ್ನು ನಾಪೋಕ್ಲು ರಾಫಲ್ಸ್ ಇಂಟರ್ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿ ಯು ಕಾಲೇಜಿನಲ್ಲಿ ಅನಾವರಣಗೊಳಿಸಲಾಯಿತು.
ಬೋಧಕ ವೃಂದ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಾಂಶುಪಾಲ ತನ್ವೀರ್ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಆಗಾಧವಾದ ಶಕ್ತಿ ಇರುತ್ತದೆ, ಅದನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು.
ಶಕ್ತಿ ಮೀರಿ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡುವುದರಿಂದ ಮಗು ವಿದ್ಯಾವಂತ ನಾಗರಿಕ ಎನಿಸಿಕೊಳ್ಳಲು ಸಾಧ್ಯವಿದೆ. ಕುಟುಂಬ, ಸಮಾಜ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮವಾದ ವಾತಾವರಣ, ಸಂಸ್ಕಾರ ಕಲ್ಪಿಸಿದಾಗ ಮಾತ್ರ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಲು ಸಾಧ್ಯವಿದೆ ಎಂದು ಹೇಳಿದರು.
ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಗೂ ಗೌರವವನ್ನು ತಂದುಕೊಡುತ್ತದೆ. ಆದರೆ ಶಿಕ್ಷಣ ಪಡೆಯದಿದ್ದರೆ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿ ಸಾಗಬೇಕಾಗುತ್ತದೆ. ಹೀಗಾಗಿ ಶಿಕ್ಷಣವು ನಮ್ಮ ಜೀವನದ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ, ಪ್ರತೀಯೊಬ್ಬ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ, ಪೋಷಕರು ಹಾಗೂ ಶಿಕ್ಷಕ ವರ್ಗದವರು ಪ್ರಾಮಾಣಿಕ ಪ್ರಯತ್ನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗೆ ಮೂಲ ಆಧಾರವಾಗಿದೆ ಎಂಬ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಬೇಕಿದೆ. ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಮತ್ತು ಸಾರ್ಥಕ ಜೀವನವನ್ನು ನಡೆಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಶಿಕ್ಷಣ ಒದಗಿಸುತ್ತದೆ ಎಂದರು.
ನುರಿತ ಉದ್ಯೋಗಿಗಳು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಶಿಕ್ಷಣ ವ್ಯವಸ್ಥೆಯ ಅತ್ಯಗತ್ಯವಾಗಿದೆ. ಶಿಕ್ಷಕರ ಗುಣಮಟ್ಟಕ್ಕೆ ನೇರವಾಗಿ ಸಂಬಂಧಿಸಿದೆ. ಭಾರತದ ಇತಿಹಾಸದಲ್ಲಿ, ಶಿಕ್ಷಣವು ಯಾವಾಗಲೂ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದ್ದು, ಭಾರತವನ್ನು ಒಂದು ಕಾಲದಲ್ಲಿ ವಿಶ್ವ ಗುರು ಎಂದು ಕರೆಯಲಾಗುತ್ತಿತ್ತು, ನಳಂದ ಮತ್ತು ವಿಕ್ರಮಶಿಲಾ ಮುಂತಾದ ಪ್ರಸಿದ್ಧ ಜ್ಞಾನ ಕೇಂದ್ರಗಳು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಈ ಸಂಸ್ಥೆಗಳು ಕಲಿಕೆಯ ಕೇಂದ್ರಗಳು ಮಾತ್ರವಲ್ಲದೆ ಭಾರತದ ಶ್ರೀಮಂತ ನಾಗರಿಕ ಸಂಸ್ಕೃತಿಯ ಪಾಲಕರೂ ಆಗಿದ್ದವು. ದುರಂತವೆಂದರೆ, ಈ ಕೇಂದ್ರಗಳಲ್ಲಿ ಸಾಕಷ್ಟು ನಾಶವಾಗಿದೆ. ಶಿಕ್ಷಣದ ಗುಣಮಟ್ಟದಲ್ಲಿ ಕುಸಿತಕ್ಕೆ ಕಾರಣವಾಯಿತು. ಖಾಸಗಿ ವಿದ್ಯಾಸಂಸ್ಥೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಉಪ ಪ್ರಾಂಶುಪಾಲೆ ರೇಖಾ ಕಿಶೋರ್ ಮಾತನಾಡಿ, ಜೀವನದಲಿ ಯಶಸ್ವಿ ವ್ಯಕ್ತಿಯಾಗಬೇಕೆಂಬ ಹಂಬಲ ಮುಖ್ಯ. ಏನಾದರೂ ಆಗು ಮೊದಲು ನೀ ಮಾನವನಾಗು’ ಎಂಬ ಕವಿವಾಣಿಯಂತೆ ಮಾನವನಾಗಲು ಶಿಕ್ಷಣ ಆತ್ಯಗತ್ಯತೆ ಇದೆ. ಜೀವನ ಸುಧಾರಿಸಲು, ಉನ್ನತಿಯೆಡೆಗೆ ಕೊಂಡೊಯ್ಯಲು ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಮಗುವಿಗೆ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇದು ಜೀವಮಾನದ ಪ್ರಕ್ರಿಯೆಯಾಗಿದ್ದು, ಸಾವಿನೊಂದಿಗೆ ಕೊನೆಗೊಳ್ಳುತ್ತದೆ. ಜೀವನದ ಗುಣಮಟ್ಟಕ್ಕೆ, ಜ್ಞಾನ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂಜಾಶ್ರೀ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಸಲ್ಮಾನ್ ಫಾರಿಶ್, ಸಿನಾನ್, ಅಯಿಷತ್ ಶಿಫಾನ, ಶಾಮಿಲ ಬಿಡುಗಡೆ ಸಂದರ್ಭ ಭಾಗವಹಿಸಿದ್ದರು.
—————
ಕೋರ್ಟ್
ಪ್ರತಿನಿಧಿ ದಿನಪತ್ರಿಕೆಯು ಶಿಕ್ಷಣ ವ್ಯವಸ್ಥೆಯನ್ನು ಪ್ರೋತ್ಸಾಹಹಿಸಲು ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನು ವಿದ್ಯಾಸಿರಿಯ ಮೂಲಕ ಹೊರತಂದಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.
-ತನ್ವಿರ್, ಪ್ರಾಂಶುಪಾಲ, ನಾಪೋಕ್ಲು ರಾಫಲ್ಸ್ ಇಂಟರ್ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿ ಯು ಕಾಲೇಜ್.
ಫೋಟೋ 14 ಎಂಡಿಕೆ 01 ; ನಾಪೋಕ್ಲು ರಾಫಲ್ಸ್ ಇಂಟರ್ ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿ ಯು ಕಾಲೇಜಿನಲ್ಲಿ ಪ್ರತಿನಿಧಿ ವಿದ್ಯಾಸಿರಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.