ಪ್ರತಿನಿಧಿ ವರದಿ ಬೇಲೂರು
ನಗರದ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ 8 ದಿನಗಳಿಂದ ನಡೆಯುತ್ತಿರುವ 38ನೇ ವರ್ಷದ ದಿಂಡಿ ಮಹೋತ್ಸವ ಹಾಗೂ ವಿಶೇಷ ಜ್ಞಾನೇಶ್ವರಿ ಗಂಥ ಪಾರಾಯಣ ಸಪ್ತಾಹ ಕಾರ್ಯಕ್ರಮ ರಾಜಬೀದಿ ಉತ್ಸಹ ಮೂಲಕ ಸಡಗರ ಸಂಭ್ರಮದಿಂದ ಜರುಗಿತು.
ಮಂಗಳವಾರ ಮುಂಜಾನೆ 5 ಗಂಟೆಯಿಂದ ಕಾಕಡರತಿ ಭಜನೆ ನಂತರ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯ ಅದ್ದೂರಿ ಉತ್ಸವವು ಆರಂಭವಾಯಿತು. ಪರಸ್ಪಳದ ಸಂತರು, ಸಮಾಜ ಬಾಂಧವರು ಶ್ರೀ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕಲಾ ಕೀರ್ತನೆ ಹ.ಭ.ಪ ಬದ್ರಿನಾಥ್ ಉತ್ತರ್ ಕರ್ ಭದ್ರಾವತಿ ಇವರಿಂದ ಕಲಾ ಕೀರ್ತನೆ ನೆರವೇರಿಸಲಾಯಿತು. ನಂತರ ಶ್ರೀ ಪಾಂಡುರಂಗ ಸ್ವಾಮಿಗೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಭಗವಂತ ರಾವ್ ಗುಜ್ಜರ್, ಬೇಲೂರು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಜಯಣ್ಣ ಮಾತನಾಡಿದರು.
ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಆನಂದ್ ಚಿಂಬಳ್ಕರ್, ಉಪಾಧ್ಯಕ್ಷರದ ಮಂಜುನಾಥ್ ಇರೋಸ್ಕರ್, ಕಾರ್ಯದರ್ಶಿ ಗಣೇಶ್ ರಾವ್ ಪೂಕಾಳೆ, ಖಜಾಂಚಿ ಗಣೇಶ್ ಚಿಂಬಳ್ಕರ್, ಸಹ ಕಾರ್ಯದರ್ಶಿ ವಿಶ್ವನಾಥ್ ಗುಜ್ಜರ್, ಸಮಾಜದ ಮಾಜಿ ಅಧ್ಯಕ್ಷ ಬಾಬುರಾವ್ ರಾವ್ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಗಣೇಶ್, ದೀಪು, ಗೋಪಿ, ಚೇತನ್ ಮುಂತಾದವರು ಹಾಜರಿದ್ದರು.