- ಯೋಗ ಗುರು ಚೇತನ್ ಗುರೂಜಿ ಅಭಿಪ್ರಾಯ
ಪ್ರತಿನಿಧಿ ವರದಿ ಸಕಲೇಶಪುರ
ನಿರಂತರ ಯೋಗ ಅಭ್ಯಾಸದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು.
ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕು ವರ್ತಕರ ಸಂಘ ಹಾಗೂ ಯೋಗ ಚೇತನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಯೋಗ ಶಿಬಿರದಲ್ಲಿ ಮನೆಯೆ ಮಂತ್ರಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ರೋಗಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ರೋಗಗಳು ಬಂದ ನಂತರ ಪರದಾಡುವ ಬದಲು ರೋಗ ಬಾರದಂತೆ ನೋಡಿಕೊಳ್ಳಲು ಯೋಗ ಅತ್ಯಂತ ಅವಶ್ಯವಾಗಿದೆ. ಒಂದು ದೇಶ ಯಾವ ರೀತಿ ಅಭಿವೃದ್ದಿಯಾಗಿದೆ ಎಂಬುವದನ್ನು ದೇಶದ ಜನರ ಆರೋಗ್ಯದ ಆಧಾರದಲ್ಲಿ ನಿರ್ಧಾರವಾಗುತ್ತದೆ. ದೇಶದ ಯುವ ಜನ ನಿಜವಾದ ಸಂಪತ್ತಲ್ಲ ದೇಶದಲ್ಲಿರುವ ಆರೋಗ್ಯವಂತ ಜನ ನಿಜವಾದ ಸಂಪತ್ತಾಗಿದೆ ಎಂದು ಹೇಳಿದರು.
ಯೋಗಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ರಂಗನಾಥ್, ಉಪಾಧ್ಯಕ್ಷ ಲಕ್ಷ್ಮಣ್ ಕೀರ್ತಿ, ಉಪನ್ಯಾಸಕ ಅಣ್ಣಪಸ್ವಾಮಿ, ಪದಾಧಿಕಾರಿಗಳಾದ ಜಗದೀಶ್, ಎನ್.ಎಸ್ ವಿಠಲ್, ಬಿಜೆಪಿ ಮುಖಂಡ ನವೀನ್ ಶೆಟ್ಟಿ, ಮುಂತಾದವರು ಹಾಜರಿದ್ದರು.
18ಎಸ್.ಕೆ.ಪಿ.ಪಿ 2: ಸಕಲೇಶಪುರ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕು ವರ್ತಕರ ಸಂಘ ಹಾಗೂ ಯೋಗ ಚೇತನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಯೋಗ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.