ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯ
ಚಿಕ್ಕಮಗಳೂರು: ಧರ್ಮಮಾರ್ಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಿದರೆ ದೇಶಕ್ಕೆ ಹಿತ. ಸಹಕಾರಿ ಬ್ಯಾಂಕ್ಗಳು ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಿಸಿದರು.
ನಗರ ಹೊರವಲಯ ಬೈಪಾಸ್ ರಸ್ತೆಯ ವೀರಶೈವ ಮಹಾಸಭಾ ಕಟ್ಟಡದಲ್ಲಿ ಆರಂಭಿಸಿರುವ ಸಹಕಾರ ಬ್ಯಾಂಕ್ನ ಮೊಟ್ಟಮೊದಲ ಶಾಖೆಗೆ ಭೇಟಿ ನೀಡಿ ಆಶೀರ್ವದಿಸಿದ ಅವರು, ಜನರ ಅಗತ್ಯತೆಗಳಿಗೆ ಬ್ಯಾಂಕ್ ಸ್ಪಂದಿಸುವಂತೆ ಆಶಿಸಿದರು.
ಪಟ್ಟಣದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ಮಾತನಾಡಿ, ಗ್ರಾಹಕರಿಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಿರುವ ಬ್ಯಾಂಕ್ ಲಾಭದಾಯಕವಾಗಿದೆ. ಸಂಪೂರ್ಣ ಗಣಕೀಕೃತ ವ್ಯವಹಾರ. ಪಿಗ್ಮಿ ಸಂಗ್ರಹ, ಪೇ ಆರ್ಡರ್, ಆರ್ಟಿಜಿಎಸ್, ನೆಪ್ಟ್ ಸೌಲಭ್ಯ ನೀಡಲಾಗುತ್ತಿದೆ ಎಂದರು.