- ಶಾಸಕ ಸುರೇಶ್ ಮಾಹಿತಿ । ಬೇಲೂರು ತಾಪಂ ಸಭಾಂಗಣದಲ್ಲಿ ಸಭೆ
ಪ್ರತಿನಿಧಿ ವರದಿ ಬೇಲೂರು
ಈ ಬಾರಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರ ಸಹಕಾರ ಮುಖ್ಯ ಎಂದು ಶಾಸಕ ಸುರೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದ ಪ್ರಯುಕ್ತ ಮಾತನಾಡಿದರು.
ಕಳೆದ ಬಾರಿ ಹಾಸನದಲ್ಲಿ ರಾಜ್ಯ ಮಟ್ಟದ ಕೆಂಪೇಗೌಡ ಜಯಂತೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿಯನ್ನು ಎಲ್ಲ ತಾಲೂಕುಗಳಲ್ಲಿ ಆಚರಿಸಲಾಗಿತ್ತು. ಆದರೆ ಈ ಬಾರಿ ಯಾವುದೇ ಗುಂಪುಗಾರಿಕೆ ಮಾಡದೆ ಎಲ್ಲರೂ ಒಟ್ಟುಗುಡಿ ಹಬ್ಬದ ರೀತಿಯಲ್ಲಿ ನಾಡ ಪ್ರಭುವಿನ ಜಯಂತಿ ಆಚರಿಸೋಣ. ಅದಕ್ಕಾಗಿ ಇದೇ ತಿಂಗಳು ೨೦ರಂದು ಒಕ್ಕಲಿಗರ ಸಮುದಾಯದ ಸಭೆಯನ್ನು ಕರೆಯಲಾಗಿದ್ದು, ಆ ಸಭೆಗೆ ಪ್ರತಿಯೊಬ್ಬರೂ ಆಗಮಿಸುವಂತೆ ಮನವಿ ಮಾಡಿದ್ದಾರೆ. ಅದೇ ರೀತಿ ೨೭ರಂದು ನಡೆಯುವ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಸಮಸ್ತ ಬಾಂಧವರು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಆಗಮಿಸುವಂತೆ ಮನವಿ ಮಾಡಿದರು.
ಕರವೆ ಅಧ್ಯಕ್ಷ ಭೋಜೆಗೌಡ ಮಾತನಾಡಿ, ಪ್ರತಿವರ್ಷವೂ ಸಹ ನಮ್ಮ ಒಕ್ಕಲಿಗರ ಯುವವೇದಿಕೆ ಹಾಗೂ ನಮ್ಮೆಲ್ಲ ಸಂಘಟನೆಗಳು ಸೇರಿಕೊಂಡು ಆಚರಿಸಿಕೊಂಡು ಬರುತ್ತಿದ್ದೆವು. ಅದರೆ ಈ ಬಾರಿ ಪೂರ್ವಭಾವಿ ಸಭೆಯನ್ನು ಮಾಡದೆ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಆದರೆ ಶಾಸಕರ ಮುಂದಾಳತ್ವದಲ್ಲಿ ಸಭೆಯನ್ನು ಆಯೋಜಿಸುವ ಮೂಲಕ ಅದ್ದೂರಿಯಾಗಿ ಜಯಂತಿಯನ್ನು ಆಚರಿಸುವ ಉದ್ದೇಶದಿಂದ ನಾವೆಲ್ಲರು ಕೈ ಜೋಡಿಸಲು ಬದ್ಧರಾಗಿದ್ದೇವೆ ಎಂದರು.
ತಹಶಿಲ್ದಾರ್ ಎಂ.ಮಮತಾ, ಕಾರ್ಯನಿರ್ವಾಹಣಾಧಿಕಾರಿ ಸತೀಶ್, ಒಕ್ಕಲಿಗರ ಯುವ ವೇದಿಕೆ ಗೌರವ ಅಧ್ಯಕ್ಷ ಮಾರುತಿ ಚಂದ್ರು, ಕಾರ್ಯದರ್ಶಿ ಗಣೇಶ್, ಕಸಾಪ ಅಧ್ಯಕ್ಷ ರಾಜೇಗೌಡ ಹಾಜರಿದ್ದರು.