ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ಮನುಷ್ಯ ಅಂಧ ಶ್ರದ್ಧೆಯಿಂದ ಶ್ರದ್ಧೆಯೆಡೆಗೆ ಕರೆದೊಯ್ಯುವ ವಿನೂತನವಾದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಚನ್ನರಾಯಪಟ್ಟಣದಲ್ಲಿನ ಸಾವಿತ್ರಮ್ಮ ಕರಿಯಪ್ಪ ಕಲ್ಯಾಣ ಮಂಟಪದಲ್ಲಿ ಜೂ.21 ರಂದು ಆಯೋಜಿಸಲಾಗಿದೆ ಎಂದು ಆಯೋಜಕ ಬೆಂಗಳೂರು ಜಿಲ್ಲಾ ನಿರೀಕ್ಷಕ ಬಾಳ ಸಾಹೇಬ ಪೋಲ್ ಹೇಳಿದರು.
ಜೂ.21 ರಂದು [ಶುಕ್ರವಾರ] ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠ ನಾಣಿಜಧಾಮ ಆಶ್ರಮದ ಅನಂತ ಶ್ರೀ ವಿಭೂಷಿತ್ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಸ್ವಾಮೀಜಿಗಳು ಭಾಗವಹಿಸಿ ಜನರ ಸಮಸ್ಯೆಗೆ ಪರಿಹಾರವನ್ನು ಸ್ಥಳದಲ್ಲೇ ನೀಡಲಿದ್ದಾರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪುರಸಭಾ ಸದಸ್ಯ ಸಿ.ಎನ್.ಶಶಿಧರ್, ಕಾರ್ಯಕ್ರಮದ ಅಯೋಜಕರಾದ, ಸ್ಥಳೀಯ ನುಗ್ಗೇಹಳ್ಳಿ ಬೂವನಹಳ್ಳಿ ಗ್ರಾಮದವರಾದ ಯೋಗೀಶ್ ಮಾತನಾಡಿದರು. ರಘು ಇದ್ದರು.
ಮನುಷ್ಯ ಮೂಡನಂಬಿಕೆ ನಿರ್ಮೂಲನಾ ಸೇರಿ ಹತ್ತಾರು ಸಾಮಾಜಿಕ ಉಪಕ್ರಮಗಳಾದ ಗ್ರಾಮ ಸ್ವಚ್ಛತಾ ಅಭಿಯಾನ, ಶೈಕ್ಷಣೀಕ ಉಪಕ್ರಮ, ವೈದ್ಯಕೀಯ ಉಪಕ್ರಮ, ಅರ್ಥಿಕ ದೃಷ್ಠಿಯಿಂದ ದುರ್ಬಲರಿಗೆ ಪುನವರ್ಸತಿ, ಮಹಿಳಾ ಸಬಲಿಕರಣ, ಅಪತ್ಕಾಲದಲ್ಲಿ ಸಹಾಯ ಅಭಿಯಾನ, ಕಾನೂನು ಕಾಯ್ದೆ ಜಾಗರೂಕತಾ ಶಿಬಿರದಂತಹ ಉಪಕ್ರಮಗಳನ್ನು ಅಯೋಜಿಸಲಾಗುತ್ತಿದೆ. ಈ ಸುವರ್ಣ ಅವಕಾಶ ಇದೀಗ ಚನ್ನರಾಯಪಟ್ಟಣದ ಜನತೆಗೆ ಒದಗಿಬಂದಿದ್ದು, ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸುವಂತೆ ಮನವಿ ಮಾಡಿದರು.