- ಜೆಎಂಎಫ್ ಸಿ ಹಿರಿಯ ಸಿವಿಲ್ ನ್ಯಾಯದೀಶೆ ಎಂ.ಎಸ್.ಶಶಿಕಲಾ ಅಭಿಪ್ರಾಯ
- ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಯೋಗ ದಿನಾಚರಣೆ
ಪ್ರತಿನಿಧಿ ವರದಿ ಬೇಲೂರು
ಯೋಗ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಜೆಎಂಎಫ್ ಸಿ ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಎಂ.ಎಸ್.ಶಶಿಕಲಾ ಹೇಳಿದರು.
10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಸದಾಕಾಲ ಒತ್ತಡದಲ್ಲಿರುತ್ತಾನೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನುಷ್ಯನ ಆಯುಷ್ಯ ಕುಗ್ಗುವ ಸಂಭವ ಹೆಚ್ಚು. ಆದ್ದರಿಂದ ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ, ಕುಟುಂಬದಲ್ಲೂ ಸಂತೋಷದಿಂದ ಬಾಳಬಹುದು. ಒತ್ತಡ ಹೆಚ್ಚಾದಂತೆ ಕೋಪ ಜಾಸ್ತಿಯಾಗುತ್ತದೆ. ಅದು ವ್ಯಾಜ್ಯಕ್ಕೂ ತಿರುಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಕೆಲಸ ಮಾಡಿಸುತ್ತದೆ. ಮನುಷ್ಯನ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ನೀಡುವ ಏಕೈಕ ಮದ್ದು ಯೋಗ ಎಂದು ಹೇಳಿದರು.
ತಾಲೂಕು ದಂಡಾಧಿಕಾರಿ ಎಂ.ಮಮತಾ ಮಾತನಾಡಿ, ಬಂಡವಾಳವಿಲ್ಲದೆ ಮನೆಯಲ್ಲೇ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅದು ಯೋಗ. ಮನುಷ್ಯ ಒತ್ತಡದಲ್ಲಿರುತ್ತಾನೆ. ಅದನ್ನು ಕಡಿಮೆ ಮಾಡಿಕೊಂಡರೆ ಆಯುಸ್ಸು ಜಾಸ್ತಿಯಾಗುತ್ತದೆ. ಕುಟುಂಬವು ಸಂತಸದಿಂದಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಬೇಲೂರು, ನಮನ್, ನಿಮನ್ಸ್ ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಬೇಲೂರು, ವಕೀಲರ ಸಂಘ ಬೇಲೂರು, ಪುರಸಭೆ ಬೇಲೂರು, ಶ್ರೀ ಚೆನ್ನಕೇಶವ ಸ್ವಾಮಿ ಆಡಳಿತ ಮಂಡಳಿ, ಪತಂಜಲಿ ಯೋಗ ಕೇಂದ್ರ ಬೇಲೂರು, ಶ್ರೀ ರಾಘವೇಂದ್ರ ಯೋಗ ಕೇಂದ್ರ ಬೇಲೂರು ಇವರ ಆಶ್ರಯದಲ್ಲಿ ನಡೆಯಿತ್ತು.
ಲಕ್ಷ್ಮಿ ನಾರಾಯಣ್, ತಾಪಂ ಕಾರ್ಯನಿರ್ವಣಾಧಿಕಾರಿ ಸತೀಶ್, ಪುರಸಭೆ ಮುಖ್ಯಧಿಕಾರಿ ಸುಜಯ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ನಮನ್ ನಿಮಾನ್ಸ್ ನವೀನ್ ಕುಮಾರ್, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ವೈದ್ಯಧಿಕಾರಿ ಡಾ.ವಿಜಯ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಇತರರು ಇದ್ದರು.
ದೇಶದಲ್ಲಿ ಸಾವಿರಾರು ವರ್ಷಗಳಿಂದ ಯೋಗದಲ್ಲಿ ಸಾಧು, ಸಂತರು ಸಾಧನೆಯನ್ನು ಮಾಡಿದ್ದು, ಜಗತ್ತಿಗೆ ಯೋಗವನ್ನು ಪರಿಚಯಿಸಿದ್ದ ಕೀರ್ತಿ ದೇಶಕ್ಕೆ ಸಲ್ಲುತ್ತದೆ. ಜೂ.21ರಂದು ಪ್ರಥಮ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಮಕ್ಕಳು ಯೋಗ ಮಾಡುವುದರಿಂದ ಆರೋಗ್ಯದ ವೃದ್ಧಿಯಾಗುತ್ತದೆ. ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಕರು, ಪೋಷಕರು ಮಾಡಬೇಕು.
-ಎಚ್.ಕೆ.ಸುರೇಶ್, ಶಾಸಕ