ಹೆಚ್.ಡಿ.ಕೋಟೆ: ಕ್ಷೇತ್ರದಲ್ಲಿ ಹಾಲಿ ಶಾಸಕರ ಆಡಳಿತ ಅಳಿತಪ್ಪಿದ್ದು, ಈ ಕೂಡಲೇ ಸರಿಪಡಿಸಿಕೊಂಡು ತಾಲೂಕಿನಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಶಾಸಕರ ಕಾರ್ಯ ವೈಖರಿಗೆ ಕಿಡಿಕಾರಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ,
ಇತ್ತೀಚೆಗೆ ನಡೆದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಪ್ರಗತಿ ಕುಂಠಿತ ಗೊಂಡಿದೆ, ಶವ ಪರೀಕ್ಷೆಗೆ ಸ್ವತಃ ನಾನು ಹೇಳಿದ ನಂತರವಷ್ಟೇ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳುತ್ತೀರಿ ಎಂದು ಶಾಸಕರೇ ಹೇಳಿರುವುದರಿಂದ ತಾಲೂಕಿನ ಆಡಳಿತದಲ್ಲಿ ಶಾಸಕರಿಗೆ ಸಂಪೂರ್ಣ ಹಿಡಿತವಿಲ್ಲ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅಸಮಾಧಾನ ಹೊರಹಾಕಿದರು.
ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು, ರೈತರ ಕೆಲಸಗಳನ್ನು ನಿಗಧಿತ ವೇಳೆಯಲ್ಲಿ ಮುಗಿಸಬೇಕು. ವಿನಾ ಕಾರಣ ನಿಮ್ಮ ಕಚೇರಿಗೆ ಅಲೆಯುವುದು ಕಂಡು ಬಂದರೆ ನಿಮ್ಮಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದ್ದೆ ಎಂದು ಸ್ಮರಿಸಿದರು.