ಬೇಲೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಬಿ.ಎಲ್. ಧರ್ಮೇಗೌಡ ಅವರು ನಿಯೋಜನೆಗೊಂಡರು.
ನಗರದ ಮೂಡಿಗೆರೆ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ತೆರವಾಗಿದ್ದ, ನಿರ್ದೇಶಕರ ಸ್ಥಾನಕ್ಕೆ ಬ್ಯಾಂಕಿನ ಅಧ್ಯಕ್ಷ ನಟರಾಜ್ ಸಮ್ಮುಖದಲ್ಲಿ ನಿರ್ದೇಶಕರನ್ನು ನಿಯೋಜನೆಗೊಳಿಸಲಾಯಿತು. ಕೆಪಿಸಿಸಿ ಮಾಜಿ ಸದಸ್ಯ, ಪುರಸಭೆ ಮಾಜಿ ಸದಸ್ಯ, ಬೇಲೂರು ಟೌನ್ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕರೂ ಹಾಲಿ ಅಧ್ಯಕ್ಷ ಬಿ.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ಧರ್ಮೇಗೌಡ ಅವರು , ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನ ನಿಯಮದಂತೆ ನಡೆದುಕೊಳ್ಳುವುದರ ಜತೆಗೆ ಬ್ಯಾಂಕಿಗೆ ಹಲವರನ್ನು ಖಾತೆದಾರರನ್ನಾಗಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತೇನೆ. ಬ್ಯಾಂಕಿನಲ್ಲಿರುವ ಅಧ್ಯಕ್ಷರು, ನಿರ್ದೇಶಕರು, ಸದಸ್ಯರ, ಆಡಳಿತ ಮಂಡಳಿ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಪ್ರಾಥಮಿಕ ಬ್ಯಾಂಕಿನ ವ್ಯವಸ್ಥಾಪಕ ಎಚ್.ಕೆ.ಆಶಾ, ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ನಂದಕುಮಾರ್ ಇದ್ದರು.