ಪ್ರತಿನಿಧಿ ವರದಿ ಅರಸೀಕೆರೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರೋತ್ಥನ ಕಾಮಗಾರಿಗಾಗಿ ಬಿಡುಗಡೆಯಾದ ೫ ಕೋಟಿ ರೂ.ಯಲ್ಲಿ ನಗರದ ಕೆಲವು ಬಡಾವಣೆಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಏಳೆಂಟು ತಿಂಗಳು ಕಳೆದರೂ ಕಾಮಗಾರಿ ಮುಕ್ತಾಯವಾಗದೆ ನಾಗರಿಕರು ನಿತ್ಯ ನರಕ ಅನುಭವಿಸುವಂತಾಗಿದೆ.
ನಗರದ ಮಾರುತಿ ಪ್ರತಿಷ್ಠಿತ ಬಡಾವಣೆಯಾದ ಮಾರುತಿ ನಗರ ಬಡಾವಣೆಯ ಜೆಪಿಎನ್ ಲೇಔಟ್ ನ ಮುಖ್ಯ ರಸ್ತೆಗಳಿಗೆ ಜಲ್ಲಿ ಹರಡಲಾಗಿದೆ ೭-೮ ತಿಂಗಳಾದರೂ ಹಾಗೆಯೇ ಬಿಟ್ಟಿರುವುದರಿಂದ ಯಾವುದೇ ದುರಸ್ತಿ ಕಾರ್ಯ ನಡೆಯದೇ ಸಾರ್ವಜನಿಕರು ದಿನನಿತ್ಯ ತೊಂದರೆ ಎದುರಿಸುವಥಾಗಿದೆ.
ಜನರು ವಾಹನಗಳು ಅಲ್ಲಿ ತಿರುಗಾಡುವುದೇ ದುಸ್ತರವಾಗಿದೆ ಸದ್ಯಕ್ಕೆ ನಮ್ಮ ಮನೆಗಳ ಬಾಗಿಲಿಗೆ ಮಣ್ಣನ್ನಾದರೂ ಮುಚ್ಚಿಕೊಡಿ ಎಂದು ನಗರಸಭೆಗೆ ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಕಾಮಗಾರಿ ನಿರಂತರವಾಗಿ ಮಾಡದಿರುವ ಬಗ್ಗೆ ಸಂಬಂಧಿಸಿದ ಹಿರಿಯ ಇಂಜಿನಿಯರ್ ಗಳು ಗುತ್ತಿಗೆದಾರರ ಮೇಲೆ ಕ್ರಮ ಇಡುವ ನಿಟ್ಟಿನಲ್ಲಿ. ಕ್ರಮ ಜರುಗಿಸಬೇಕು ಎಂದು ನಾಗರಿಕರ ಒತ್ತಾಯವಾಗಿದೆ.
ಜಲ್ಲಿಯನ್ನು ಹಾಕಿ ೭-೮ ತಿಂಗಳಾಗಿದೆ. ಜಲ್ಲಿಯ ಮೇಲೆ ಜನರು ಓಡಾಡಲು ಹೇಗೆ ಸಾಧ್ಯ. ಈ ನರಕವನ್ನು ಅನುಭವಿಸಲು ನಮಗೆ ಯಾವ ಗ್ರಹಚಾರ, ಇದಕ್ಕಿಂತ ಹಳೆಯ ರಸ್ತೆ ಉತ್ತಮವಾಗಿತ್ತು ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ನಗರಸಭೆ ಅಧ್ಯಕ್ಷರಿಗೆ ಮೊರೆ ಹೋಗೋಣವೆಂದರೆ ಅಧ್ಯಕ್ಷರು ಇಲ್ಲ. ಜಿಲ್ಲಾಧಿಕಾರಿಗಳು ಆಗಾಗ್ಗೆ ಬಂದು ಜನರ ಸಮಸ್ಯೆಯನ್ನ, ವಿಚಾರಿಸಬೇಕಿತ್ತು ಎಂದೋ ಒಂದು ಬಾರಿ ಬಂದು ಹೋದರೆ ಸಾಕೆ? ಇಲ್ಲವೇ ಅವರ ಪ್ರತಿನಿಧಿಯನ್ನಾದರೂ ನಗರಸಭೆಗೆ ಕಳಿಸಿಕೊಡಬೇಕು ಸಾರ್ವಜನಿಕ ಸಮಸ್ಯೆಗಳನ್ನ ಅವಲೋಕಿಸಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುವ ಕಾರ್ಯ ಆಗಬೇಕು ಎನ್ನುತ್ತಾರೆ.
ಇತರೆಡೆ ಜಲ್ಲಿಯ ಮೇಲೆ ತಿರುಗುತ್ತಿರುವ ನಾಗರಿಕರು, ಜಿಲ್ಲಾಧಿಕಾರಿಗಳೆ ಮಾರುತಿ ನಗರ ವಿವಿಧ ಬಡಾವಣೆಯ ರಸ್ತೆಗಳಿಗೆ ಒಮ್ಮೆ ನಗರದ ಬನ್ನಿ ಎಂಬುದು ನಾಗರಿಕರ ಮನವಿಯಾಗಿದೆ.