ಪ್ರತಿನಿಧಿ ವರದಿ ಸಕಲೇಶಪುರ
ಪಟ್ಟಣದ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿದರು.
ಗುರುವಾರದಂದು ಸಕಲೇಶಪುರದಲ್ಲಿ ಲೋಕಾರ್ಪಣೆಗೊಂಡ ಶ್ರೀ ಬಸವೇಶ್ವರ ಪುತ್ತಳಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಬಿ.ಎಸ್.ಯಡಿಯೂರಪ್ಪನವರು ಆಗಮಿಸಬೇಕಾಗಿತ್ತು. ಕಾರಣಾಂತರಗಳಿಂದ ಯಡಿಯೂರಪ್ಪನವರು ಆಗಮಿಸಲಾಗಿರಲಿಲ್ಲ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತ್ತು. ಹಾಗಾಗಿ ವಿಶೇಷ ಆಸಕ್ತಿಯನ್ನು ತಳೆದು ಭಾನುವಾರ ಸಕಲೇಶಪುರಕ್ಕೆ ಆಗಮಿಸಿ ನೂತನವಾಗಿ ಲೋಕಾರ್ಪಣೆಗೊಂಡಿರುವ ಶ್ರೀ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಮಲೆನಾಡು ವೀರಶೈವ ಸಮಾಜ(ರಿ)ಮತ್ತು ಅಂಗ ಸಂಸ್ಥೆ, ಶ್ರೀ ಬಸವೇಶ್ವರ ಪುತ್ಥಳಿ ನಿರ್ಮಾಣ ಸಮಿತಿ ಸಕಲೇಶಪುರ ಹಾಗೂ ಶಾಸಕರಾದ ಸಿಮೆಂಟ್ ಮಂಜು ಅವರಿಂದ ವತಿಯಿಂದ ಮಾಜಿ ಮುಖ್ಯಮಂತ್ರಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಶಾಸಕರಾದ ಸಿಮೆಂಟ್ ಮಂಜು, ದಿವಾನ್ ದೇವರಾಜ್, ಬಿಜೆಪಿ ಅಧ್ಯಕ್ಷ ಅಶ್ವಥ್, ಮಠಸಾಗರ ಶ್ರೀಧರ, ಯಡಹಳ್ಳಿ ಮಂಜುನಾಥ್, ಮಸ್ತಾರೆ ಲೋಕೇಶ್, ಯತೀಶ್, ಕಾಡಮಕ್ಕಿ ಹರೀಶ್, ಹಿತೇಶ್, ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶಶಿಕಲಾ, ಸಂಗಪ್ಪ, ನೇತ್ರಾ ಮಂಜುನಾಥ್, ಹುರುಡಿ ಅರುಣ್ ಕುಮಾರ್ ಉಪಸ್ಥಿತರಿದ್ದರು.