ಪ್ರತಿನಿಧಿ ವರದಿ ಸಾಲಿಗ್ರಾಮ
ತಾಲೂಕಿನ ಭೇರ್ಯ ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ರೂಪಹರೀಶ್ ಅಧಿಕಾರ ಸ್ವೀಕರಿಸಿದರು.
ಈ ಹಿಂದಿನ ಅಧ್ಯಕ್ಷೆ ಜಯಲಕ್ಷ್ಮೀ ಕೃಷ್ಣೇಗೌಡರ ರಾಜೀನಾಮೆಯಿಂದ ಹುದ್ದೆ ತೆರವಾಗಿದ್ದ ಹಿನ್ನೆಲೆಯಲ್ಲಿ ರೂಪ ಹರೀಶ್ ಅವರು ಪಿಡಿಒ ಪ್ರತಾಪ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು.
ಪ್ರಭಾರ ಅಧ್ಯಕ್ಷರನ್ನು ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಕೃಷ್ಣೇಗೌಡ, ಸದಸ್ಯರಾದ ಬಿ.ಕೆ.ಮಂಜಪ್ಪ, ಬಿ.ಎಲ್.ರಾಜಶೇಖರ್, ಬಿ.ಎಸ್.ಕೃಷ್ಣೇಗೌಡ, ಬಿ.ಪಿ.ಪ್ರಕಾಶ್, ತಾಯಮ್ಮ ಪುಟ್ಟಮಾದಯ್ಯ, ಶಾಂತಮ್ಮ ಅಭಿನಂದಿಸಿದರು.
ಚಿತ್ರಶೀರ್ಷಿಕೆ: ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ರೂಪ ಹರೀಶ್ ಅಧಿಕಾರ ಸ್ವೀಕರಿಸಿದರು.