ರವರ-ಅವರ
————————————-
ಪ್ರತಿನಿಧಿ ವರದಿ ಹುಣಸೂರು
ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಬಳಿ ಸರ್ಕಾರಿ ಬಸ್ ಮತ್ತು ಬೈಕ್ ಅಪಘಾತದಲ್ಲಿ ಕುರುಬರ ಹೊಸಳ್ಳಿ ಗ್ರಾಮದ ಯುವಕ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗುರುಪುರ ಪಂಚಾಯಿತಿಯ ಕುರುಬರ ಹೊಸಳ್ಳಿ ಗ್ರಾಮದ ರವಿ ಅವರ ಮಗ ಮಂಜು ಮೃತಪಟ್ಟಾತ. ಪಿರಿಯಾಪಟ್ಟಣದಿಂದ ಹುಣಸೂರಿಗೆ ಬರುವ ದಾರಿ ಮಧ್ಯೆ ಓವರ್ ಟೇಕ್ ಮಾಡಲು ಹೋಗಿ ಮುಂದೆ ಬಂದ ಸರ್ಕಾರಿ ಬಸ್ ಗೆ ಗುದ್ದಿದ್ದಾನೆ, ಮೃತ ಒಂದು ವರ್ಷದ ಹಿಂದೆ ರಕ್ಷಿತ ಎಂಬ ಹುಡುಗಿಯನ್ನು ಮದುವೆಯಾಗಿದ್ದು 3 ತಿಂಗಳ ಮಗುವಿದೆ ಎಂದು ತಿಳಿದು ಬಂದಿದೆ.