ಹಿನ್ನಲೆ-ಹಿನ್ನೆಲೆ
ಅಧ್ಯಕ್ಷರಾದ-ಅಧ್ಯಕ್ಷ
ಕಾರ್ಯದರ್ಶಿಯಾದ-ಕಾರ್ಯದರ್ಶಿ
ಸುಶೀಲ-ಸುಶೀಲಾ
ಯಾರಿಗೂ ಶ್ರೀಮತಿ ಬಳಸುವುದು ಬೇಡ.
——————
18 ವರ್ಷಗಳ ನಂತರ ಅರಣ್ಯ ಹಕ್ಕು ಕಾಯ್ದೆ-2006 ಜಾರಿಗೆ ಪ್ರಯತ್ನ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ತಾಲೂಕಿನ ಚಾಮೇನಹಳ್ಳಿ ಹುಂಡಿ ಬಿ ಹಾಡಿಯಲ್ಲಿ ರಮೇಶ್ ಅಧ್ಯಕ್ಷತೆಯಲ್ಲಿ ಅರಣ್ಯ ಹಕ್ಕು ಸಮಿತಿ ನಾಮಫಲಕ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.
ನಿಸರ್ಗ ಸಂಸ್ಥೆಯ ನಿರ್ದೇಶಕ ಪ್ರಭು ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ-2006 ಜಾರಿಗೆ ಬಂದು 18 ವರ್ಷಗಳಾದರು ಇನ್ನೂ ಅನುಷ್ಠಾನವಾಗಿಲ್ಲ. ಇಂದು ನಾವು ಅರಣ್ಯ ಹಕ್ಕು ಕಾಯ್ದೆ-2006ರ ಪ್ರಕಾರ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ಸಮಿತಿಯ ನಾಮಫಲಕವನ್ನು ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷಕರ ವಿಷಯ ಎಂದರು.
ಮುಂದಿನ ದಿನಗಳಲ್ಲಿ ಅರಣ್ಯ ಹಕ್ಕು ಸಮಿತಿಯ ಮೂಲಕ ವೈಯಕ್ತಿಕ ಹಕ್ಕು (ನಮೂನೆ A) ಸಾಮೂದಾಯಿಕ ಹಕ್ಕು( ನಮೂನೆ ಬಿ) ಹಾಗೂ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಹಕ್ಕು (ನಮೂನೆ C)ಗಳಿಗೆ ಅರ್ಜಿ ಹಾಕಿ ಹಾಡಿಯಲ್ಲಿರುವ ಪ್ರತಿಯೊಂದು ಕುಟುಂಬಗಳಿಗೂ ಹಕ್ಕುಗಳು ದೊರಕುವಂತೆ ಮಾಡಬೇಕು ಈ ಹಿನ್ನೆಲೆಯಲ್ಲಿ ಅರಣ್ಯ ಸಮಿತಿ ಸದಸ್ಯರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರಮುಖವಾಗಿ ಚಾಮೇನಹಳ್ಳಿ ಹುಂಡಿ ಬಿ ಯಿಂದ ಚಾಮೇನಹಳ್ಳಿ ಹುಂಡಿ A ಹಾಡಿಯ ಪ್ರಾಥಮಿಕ ಶಾಲೆಗೆ 10ಕ್ಕಿಂತ ಹೆಚ್ಚು ಮಕ್ಕಳು ದಾಖಲಾಗಿದ್ದು, ಹಾಡಿಯಿಂದ ಶಾಲೆಗೆ ಹೋಗಲು 3 ಕಿಮೀ ಗಿಂತ ಹೆಚ್ಚು ದೂರವಿರುವುದರಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಇದ್ದು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದರ ಬಗ್ಗೆ ಸಂಬಂಧಪಟ್ಟ ಯಾವುದೇ ಇಲಾಖೆಯು ಕೂಡ ಗಮನ ಹರಿಸದೆ ಇರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮಾತನಾಡಿ, ಆದಿವಾಸಿಗಳು ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಆದಿವಾಸಿಗಳು ಇತರ ಜನರಂತೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಹಾಡಿಯಲ್ಲಿ ಈಗಾಗಲೇ ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರಿನ ವ್ಯವಸ್ಥೆಯನ್ನು ಒದಗಿಸುವ ಬಗ್ಗೆ ಕೆಲಸ ಪ್ರಾರಂಭಿಸಿದ್ದು, ಹಾಡಿಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಹಾಡಿಯಿಂದ 15ಕ್ಕಿಂತ ಹೆಚ್ಚು ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಅರ್ಜಿ ನೀಡಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂ ವತಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿಸಿ ಕೊಡಲಾಗುವುದು. ಹಾಡಿಯಲ್ಲಿ ಏನೇ ಸಮಸ್ಯೆ ಕಂಡು ಬಂದರು ಗ್ರಾಮ ಪಂಚಾಯಿತಿಗೆ ಬಂದು ಭೇಟಿ ಮಾಡುವಂತೆ ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಯೋಜನೆಯ ಸಂಯೋಜಕ ದಿವ್ಯಾ , ಕಾರ್ಯಕರ್ತ ಚಿಕ್ಕತಿಮ್ಮನಾಯ್ಕ, ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಬಸವರಾಜು, ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಬಸಪ್ಪ, ಸದಸ್ಯರಾದ ಮಣಿ, ರಘು, ಪುಟ್ಟಮಣಿ, ಶಾಂತಿ, ಸುಶೀಲ, ದಾಸ, ಮರಿಯ, ಮರಿಯಪ್ಪ ಯಜಮಾನ ಕೆಂಚ, ಜೆಎಸ್ಎಸ್ ಕಾಲೇಜಿನ ಉಪನ್ಯಾಸಕರಾದ ಕುಮುದಿನಿ, ವಿದ್ಯಾರ್ಥಿಗಳು, ಹಾಡಿಯ 35ಕ್ಕಿಂತ ಹೆಚ್ಚು ಆದಿವಾಸಿ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.