ಪ್ರತಿನಿಧಿ ವರದಿ ಮೂಗೂರು
ಗ್ರಾಮದ ಸಮೀಪವಿರುವ ಕುರುಬೂರು ಗ್ರಾಮದ ಶ್ರೀ ನಿರ್ವಾಣಸ್ವಾಮಿ ಪ್ರೌಢ ಶಾಲೆಯ ಅವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಲ್ಲಿ ಸದ್ಯಸರಾಗಿ ಸಾಲ ಪಾವತಿ ಮಾಡಿ ಮರುಪಾವತಿ ಮಾಡವದಲ್ಲದೇ, ಇನ್ನೂ ಅನೇಕ ರೀತಿಯ ಸಾಮಾಜಿಕ ಕಾರ್ಯಗಳು, ಶಾಲೆಗಳಿಗೆ ಅತಿಥಿ ಶಿಕ್ಷಕರ ವ್ಯವಸ್ಥೆ, ಡೆಸ್ಕ್, ಕಾಂಪೌಂಡ್, ಶೌಚಾಲಯ, ವಿಕಲಚೇತನರಿಗೆ ವೀಲ್ ಚೇರ್, ನಿರ್ಗತಿಕರಿಗೆ ಮಾಸಾಶನ, ವಸತಿ ಯೋಜನೆ ಕುರಿತು ತಿಳಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಆದ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ಇಂದಿನ ಯುವ ಜನಾಂಗ ಮದ್ಯಪಾನ, ತಂಬಾಕು, ಕೊಕೇನ್, ಹೆರಾಯನ್, ಗಾಂಜಾ ಸೇರಿದಂತೆ ಮುಂತಾದ ಮಾದಕ ವಸ್ತುಗಳು ವಸ್ಯನಿಸಹನೆಗಳಾಗತ್ತಿದು, ತಮ್ಮ ಸುಂದರ ಬದುಕನ್ನು ನರಕಯಾತನೆಗೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರಿಂದ ಮಕ್ಕಳು ಮಾದಕ ದ್ರವ್ಯಗಳ ಸೇವನೆಯಿಂದ ದುಷ್ಪರಿಣಾಮ ಅರಿತು ಆದರ್ಶಮಯ ಜೀವನ ನಡೆಸಿಕೊಳ್ಳಬೇಕು ಎಂದರು.
ಜನ ಜಾಗೃತಿ ವೇದಿಕೆ ಸದಸ್ಯರು ಕಿರಂಗಸೂರು ಶಂಕರ್, ಮಹದೇವ ಪ್ರಸಾದ್, ಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಶಿಕ್ಷಕರ ವೃಂದ ಮೇಲ್ವಿಚಾರಕೀ ಕುಮಾರಿ, ಕೃಷಿ ಮೇಲ್ವಿಚಾರಕ ಕುಮಾರ್, ಸೇವಾ ಪ್ರತಿನಿಧಿ ಜಯಲಕ್ಷ್ಮೀ ಇತರರು ಹಾಜರಿದ್ದರು.