ಪ್ರತಿನಿಧಿ ವರದಿ ನಂಜನಗೂಡು
ನಗರದ ಕೆಎಸ್ಆರ್ಟಿಸಿ ಘಟಕದಲ್ಲಿ ಸಾರಿಗೆ ನೌಕರರು ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ನಾಡ ಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ವಿಭಾಗೀಯ ನಿಯಂತ್ರಣ ಅಧಿಕಾರಿ ವೀರೇಶ್ ತ್ಯಾಪೆ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿದರು. ವಿಭಾಗೀಯ ಸಂಚಲನ ಅಧಿಕಾರಿ ದಶರಥ್ ಅವರು ಸಿಬ್ಬಂದಿ ವರ್ಗದವರಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು. ವಾಗ್ಮಿ ಹಲ್ಲರೆ ಶಿವಬುದ್ಧಿ, ಕೆಂಪೇಗೌಡರ ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.
ಜಯಂತಿಯಲ್ಲಿ ಭದ್ರತಾ ಅಧಿಕಾರಿ ಶಿವರಾಜೇಗೌಡ, ಘಟಕ ವ್ಯವಸ್ಥಾಪಕ ಪಿ.ತ್ಯಾಗರಾಜ್, ಲೆಕ್ಕಾಧಿಕಾರಿ ಸುರೇಶ್ ಬಾಬು, ಬಸವರಾಜೇಗೌಡ ಮಡಹಳ್ಳಿ ರಾಜೇಶ್, ಟಿ.ಎಂ.ಬಸವರಾಜು ಸೇರಿದಂತೆ ಸಮಸ್ತ ಸಿಬ್ಬಂದಿ ಹಾಗೂ ನೌಕರರು ಹಾಜರಿದ್ದರು.