ಶತಾಯುಷಿ ಕರಿಯಣ್ಣ
ಕೆ.ಆರ್.ನಗರ: ತಾಲೂಕಿನ ನಾಟನಹಳ್ಳಿ ಗ್ರಾಮದ ಶತಾಯುಷಿ ಎನ್.ಎಸ್. ಮಲ್ಲೇಗೌಡ (ಕರಿಯಣ್ಣ) ಭಾನುವಾರ ಸಂಜೆ ನಿಧನರಾದರು.
ಅವರು ವಯೋ ಸಹಜ ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರಿಗೆ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಸೋಮವಾರ ಸ್ವಗ್ರಾಮದಲ್ಲಿ ನಡೆಯಲಿದೆ.