ಮಾಜಿ ಶಾಸಕ ಎಸ್.ಬಾಲರಾಜು ಅಭಿಮಾತ
ಪ್ರತಿನಿಧಿ ವರದಿ ಚಾಮರಾಜನಗರ
ಆತ್ಮರಕ್ಷಣೆಗಾಗಿ, ಆತ್ಮಸ್ಥೈರ್ಯ ಕಲ್ಪಿಸಿಕೊಳ್ಳಲು ಕರಾಟೆ ಕಲಿಕೆ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.
ನಗರದ ವಿಶ್ವ ಹಿಂದು ಪರಿಷತ್ ಕಾಲೇಜಿನ ಆವರಣದಲ್ಲಿ ನ್ಯಾಷನಲ್ ಕರಾಟೆ ಅಸೋಸಿಯೇಷನ್ ಇಂಡಿಯಾ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾಟೆಯಿಂದ ಸ್ವಯಂ ರಕ್ಷಣೆಯ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಇಂತಹ ಕ್ರೀಡೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಪ್ರತಿ ವಿದ್ಯಾರ್ಥಿಯು ಸಂಕೋಚ ಪಡದೆ ಕರಾಟೆಯನ್ನು ಶ್ರದ್ದೆಯಿಂದ ಕಲಿಯಬೇಕು ಎಂದು ಸಲಹೆ ನೀಡುದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ಸಹಕಾರಿಯಾಗಿರುವ ಕರಾಟೆಯನ್ನು ಕಲಿಯಬೇಕು. ಇಂತಹ ಪಂದ್ಯಾವಳಿಯಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಉತ್ತೇಜನ ದೊರೆಯಲಿದೆ. ಸೋಲು-ಗೆಲುವು ಸಹಜ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕರಾಟೆ ಪಟುಗಳಿಗೆ ಶುಭ ಕೋರಿದರು.
ಕರ್ನಾಟಕ ರಾಜ್ಯ ಕುಂಗ್-ಫು ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ವಕೀಲ ರಾಜೇಂದ್ರ, ಜಿಲ್ಲಾ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷ ಗಣೇಶ್, ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಬೆಳ್ಳಿಪದಕ ವಿಜೇತ ಎಸ್.ಯೋಗೇಶ್, ಬಾಕ್ಸಿಂಗ್ ಚಿನ್ನಪದಕ ವಿಜೇತ ಎಂ.ತೇಜಸ್ವಿನಿ, ವುಷು ಚಿನ್ನಪದಕ ವಿಜೇತ ಎನ್.ಹೃತ್ವಿಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಆಯೋಜಕ ಅಗರ ಚಂದ್ರು, ಅಂತಾರಾಷ್ಟ್ರೀಯ ಕರಾಟೆ ತೀರ್ಪುಗಾರ ಶಂಕರ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ನಾಯಕ, ಆಮ್ಆದ್ಮಿ ಪಕ್ಷದ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎನ್.ರಾಜು, ಅಂತಾರಾಷ್ಟ್ರೀಯ ಕರಾಟೆ ತೀರ್ಪುಗಾರ ಶಿವದಾಸ್, ಯರಿಯೂರು ನಾಗರಾಜು, ವಿಷ್ಣುಜಿ.ನಾಯಕ್, ನಾಗತನೀಶ್, ಶಿಲ್ಪಾದಾಸ್, ಸುದೀಪ್ ಇದ್ದರು.
2ಸಿಎಚ್ಎನ್.1:ಚಾಮರಾಜನಗರದ ವಿಶ್ವ ಹಿಂದು ಪರಿಷತ್ ಕಾಲೇಜಿನ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಮಾಜಿ ಶಾಸಕ ಎಸ್.ಬಾಲರಾಜು ಉದ್ಘಾಟಿಸಿದರು.