ಪ್ರತಿನಿಧಿ ವರದಿ ಕೊಳ್ಳೇಗಾಲ
ವಯೋನಿವೃತ್ತಿ ಹೊಂದಿದ ಹನೂರು ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ವಿಜಯ್ ಕುಮಾರ್ ಅವರನ್ನು ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ ಸನ್ಮಾನಿಸಿ ಬೀಳ್ಕೊಟ್ಟರು.
ನಂತರ ಮಾತನಾಡಿ, 39 ವರ್ಷ ಕಾಲ ಸುದೀರ್ಘವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿಲಯ ಪಾಲಕ ವಿಜಯ್ ಕುಮಾರ್ ಇದೀಗ ವೃತ್ತಿನಿಂದ ನಿವೃತ್ತಿಯಾಗಿದ್ದು, ಅವರ ಮುಂದಿನ ಜೀವನ ಇನ್ನಷ್ಟು ನೆಮ್ಮದಿ ಹಾಗೂ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಗಿರಿಜನ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ದಾಸಿರಥಿ, ಚಿಕ್ಕಬಸವಯ್ಯ, ಎಸ್.ಜಯಕಾಂತ, ವಿಜಯ್ ಕುಮಾರ್ ಅವರಿಗೆ ಪುಷ್ಪಮಾಲೆ ಹಾಕಿ ಗೌರವಿಸಿ ಬೀಳ್ಕೊಟ್ಟು ಗುಣಗಾನ ಮಾಡಿದರು.
ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ವಿಜಯ್ ಕುಮಾರ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಗೆ ನಾನು ಇದುವರೆಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ನಿಯಮಾನುಸಾರ ಹಲವು ವಿದ್ಯಾರ್ಥಿಗಳಿಗೆ ದಾರಿ ದೀಪವಾಗುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಡಿಗೆ ಸಿಬ್ಬಂದಿ ಪುಟ್ಟುಸಿದ್ದಮ್ಮ ಅವರಿಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ಅಧಿಕಾರಿಗಳು ಬೀಳ್ಕೊಟ್ಟು ಗೌರವಿಸಿದರು.
ವಾರ್ಡನ್ ಮರಿಸ್ವಾಮಿಗೌಡ, ಸಿಬ್ಗತ್ ಉಲ್ಲಾ, ಹನುಮಂತು, ಶಾಂತರಾಜು, ಕೆ.ಲಕ್ಷ್ಮಿ, ಮಹದೇವ, ಕಾಂತರಾಜು, ಜ್ಯೋತಿ, ಮಂಜುಳಾ, ಚಂದ್ರಮ್ಮ, ಭವ್ಯ, ವಸಂತ, ಶ್ರೀನಿವಾಸ, ವಿಜಯ ಕುಮಾರ್ ಹಾಗೂ ಇತರರು ಇದ್ದರು.
2ಕೆಜಿಎಲ್-3 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ ಅವರು ವಯೋನಿವೃತ್ತಿ ಹೊಂದಿದ ಹನೂರು ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ವಿಜಯ್ ಕುಮಾರ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.