ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಶ್ರೀ ಮರಳೇಶ್ವರಸ್ವಾಮಿ ದೇವಸ್ಥಾನದ ಬೀದಿಯಲ್ಲಿ ದುಷ್ಕರ್ಮಿಗಳು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ್ದಾರೆ.
ಬಿ.ಎನ್.ಜಗದೀಶ್ ಎಂಬುವರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು, ಗುರುವಾರ ರಾತ್ರಿ ಬೆಳಕಿಗೆ ಬಂದಿದೆ.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಎನ್.ಜಗದೀಶ್, ತನ್ನ ಪತ್ನಿ ಜತೆ ಮೈಸೂರಿಗೆ ಕಣ್ಣಿನ ಚಿಕಿತ್ಸೆಗಾಗಿ ಮನೆಯ ಬೀಗ ಹಾಕಿಕೊಂಡು ಬುಧವಾರ ತೆರಳಿದ್ದರು. ಈ ನಡುವೆ ಚಿಕಿತ್ಸೆ ಪಡೆದು ಗುರುವಾರ ರಾತ್ರಿ 8.30 ಗಂಟೆಗೆ ಮನೆಗೆ ಬಂದಾಗ ಕಳುವಾಗಿರುವುದು ತಿಳಿದಿದೆ. ಬಳಿಕ ಮನೆಯಲ್ಲಿ ಪರಿಶೀಲನೆ ನಡೆಸಿದಾಗ 1.41 ಲಕ್ಷ ಬೆಲೆ ಬಾಳುವ 47 ಗ್ರಾಂ ಚಿನ್ನಾಭರಣ, 8 ಸಾವಿರದ ಮೊಬೈಲ್, 1.25 ಲಕ್ಷ ನಗದು ನಾಪತ್ತೆಯಾಗಿರುವುದು ಗೊತ್ತಾಗಿದೆ. ಘಟನೆ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಉಮಾವತಿ ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದಾರೆ.