ಪ್ರತಿನಿಧಿ ವರದಿ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಸಮೀಪ ಅಪರಿಚಿತ ಕಾರೂಂದು ಬೈಕ್ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಬೇಗೂರು ಸಮೀಪದ ಸೋಮಹಳ್ಳಿ ಗ್ರಾಮದ ನಾಗೇಂದ್ರ ಹಾಗೂ ಮಹದೇವಸ್ವಾಮಿ ಎಂಬುವರೆ ಮೃತಪಟ್ಟ ದುರ್ದೈವಿಗಳು, ಕಾರ್ಯನಿಮಿತ್ತ ಗುಂಡ್ಲುಪೇಟೆಗೆ ತೆರಳಿ ವಾಪಸಾಗುವ ಅಪಘಾತ ಸಂಭವಿಸಿದೆ. ಕರ್ನಾಟಕ ನೋಂದಣಿಯ ಕಾರೂಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪೆಟ್ರೊಲ್ ಬಂಕ್ವೂಂದರ ಸಿಸಿಟಿವಿಯಲ್ಲಿ ಕಾರಿನ ನಂಬರ್ ಪತ್ತೆಯಾಗಿದೆ ಎನ್ನಲಾಗಿದೆ. ಬೇಗೂರು ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಮುಂದಿನ ತನಿಖೆ ಕೈಗೂಂಡಿದ್ದಾರೆ.